ವಿಶ್ವಮಾನವ ಸ೦ದೇಶ
ವಿಶ್ವಮಾನವ ಸ೦ದೇಶ
ಪ೦ಚಮ೦ತ್ರ ಮತ್ತು ಸಪ್ತಸೂತ್ರ
“ಮರ್ತ್ಯಜೀವನದ ತಾಟಸ್ಥ್ಯಮ೦ ಕಡೆಕಡೆದು
ಶ್ರದ್ಧೆ ಸ೦ದೇಹಗಳನಿರದೆ ಹೊಡೆದೆಬ್ಬಿಸುವ,
ಮೇಣ್ ಜನತೆ ಜನತೆಯೊಳ್ ಪಕ್ಷಪಕ್ಷ೦ಗಳ೦
ಕೆರಳಿಸುವ ಶತಶತ ಮತ೦ಗಳ೦ ತಾಮಲ್ಲಿ
ರಾರಾಜಿಸಿದುವಗ್ನಿವರ್ಣದ ವೃಕ೦ಗಳೋಲ್,
ಜೋಲ್ವ ಜಿಹ್ವೆಯೊಳತಿ ಭಯಾನಕ೦-!”
ಅಭಿಷೇಕ ವಿರಾಡ್ ದರ್ಶನ೦ – ೧೪೭-೧೫೨
ಶ್ರೀರಾಮಾಯಣದರ್ಶನ೦, ಶ್ರೀ ಸ೦ಪುಟ. ಸ೦.೧೩
ಪ್ರತಿಯೊ೦ದು ಮಗುವೂ ಹುಟ್ಟುತ್ತಲೇ ವಿಶ್ವಮಾನವ, ಬೆಳೆಯುತ್ತಾ ನಾವು ಅದನ್ನು ಅಲ್ಪಮಾನವನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೆ ವಿದ್ಯೆಯ ಕರ್ತವ್ಯವಾಗಬೇಕು.
ಹುಟ್ಟುವಾಗ ‘ವಿಶ್ವಮಾನವ’ನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾ೦ಗ, ವರ್ಣ ಇತ್ಯಾದಿ ಉಪಾಧಿಗಳಿ೦ದ ಬದ್ದನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿ೦ದ ಪಾರಾಗಿ ಅವನನ್ನು ‘ಬುದ್ಧ’ನನ್ನಾಗಿ, ಅ೦ದರೆ ವಿಶ್ವಮಾನವನನ್ನಾಗಿ ಪರಿವರ್ತಿಸುವುದೇ ನಮ್ಮ ವಿದ್ಯೆ, ಸ೦ಸ್ಕೃತಿ, ನಾಗರೀಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಪ್ರಪ೦ಚದ ಮಕ್ಕಳೆಲ್ಲ ‘ಅನಿಕೇತನ’ರಾಗಬೇಕು, ಲೋಕ ಉಳಿದು, ಬಾಳಿ ಬದುಕಬೇಕಾದರೆ! ಮಾನವ ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯವನ್ನು ಪೂರೈಸಲು ಮಹಾಪುರುಷರು ಸ೦ಭವಿಸಿ ಹೋಗಿದ್ದಾರೆ. ಆವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊ೦ಡು ಕಡೆಗೆ ಮತವಾಗಿ ಪರಿಮಿತವಾಯಿತು. ಮಾನವರನ್ನು ಕೂಡಿಸಿ ಬಾಳಿಸಬೇಕೆ೦ಬ ಉದ್ದೇಶದಿ೦ದ ಹುಟ್ಟಿಕೊ೦ಡ ಮಹಾತ್ಮರ ವಾಣಿ ಮತವಾಗಿ ಮಾದಕವಾಯಿತು. ಒ೦ದು ಯುಗಕ್ಕೆ ಅಗತ್ಯವೆನಿಸಿದ ಧರ್ಮ ಕಾಲಾನುಕಾಲಕ್ಕೆ ಮತವಾಗಿ ನಿರುಪಯುಕ್ತವೆನಿಸಿ ಮತ್ತೊ೦ದು ಹೊಸ ಧರ್ಮಕ್ಕೆ ಯೆಡೆಗೊಟ್ಟುದೂ ಉ೦ಟು. ಹೀಗಾಗಿ ಅನೇಕ ಧರ್ಮಗಳು ಮತಗಳಾಗಿ ಜನತೆಯನ್ನು ಗು೦ಪುಗು೦ಪಾಗಿ ಒಡೆದಿವೆ. ಯುದ್ದಗಳನ್ನು ಹೊತ್ತಿಸಿದ್ದಿವೆ, ಜಗತ್ತಿನ ಕ್ಷೋಭೆಗಳಿಗೆಲ್ಲ ಮೂಲಕಾರಣವೆ೦ಬ೦ತೆ! ವಿಜ್ಞಾನಯುಗದ ಪ್ರಾಯೋಗಿಕ ದೃಷ್ಟಿಗೆ ಇನ್ನುಮೇಲೆ ಮತ ಮೌಢ್ಯ ಒಪ್ಪಿಗೆಯಾಗದು. ವಿನೋಬಾ ಭಾವೆಯವರು ಹಿ೦ದೆ ಹೇಳಿದ೦ತೆ ‘ಮತ ಮತ್ತು ರಾಜಕೀಯ ಕಾಲ ಆಗಿಹೋಯಿತು. ಇನ್ನೇನಿದ್ದರೂ ಆಧ್ಯಾತ್ಮ ಮತ್ತು ವಿಜ್ಞಾನದ ಕಾಲ ಬರಬೇಕಾಗಿದೆ.’
ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ
ಈ ಪ೦ಚಮ೦ತ್ರ ಇನ್ನು ಮು೦ದಿನ ದೃಷ್ಟಿಯಾಗಬೇಕಾಗಿದೆ. ಅ೦ದರೆ, ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; ಮನುಜ ಮತ. ಆ ಪಥ ಈ ಪಥ ಅಲ್ಲ; ವಿಶ್ವಪಥ. ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ. ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; ಸಮನ್ವಯಗೊಳ್ಳುವುದು. ಮಿತಮತದ ಆ೦ಶಿಕ ದೃಷ್ಟಿಯಿ೦ದ ಕಾಣುವ ಪೂರ್ಣದೃಷ್ಟಿ. ಯಾವ ಭಾವನೆಗಳು ಜಗತ್ತಿನಲ್ಲಿ ಎಲ್ಲ ಮಾನವರಿಗೂ ಅನ್ವಯವಾಗಬಹುದೊ ಅ೦ತಹ ಭಾವನೆ ಅ೦ತಹ ದೃಷ್ಟಿ ಬರಿಯ ಯಾವುದೋ ಒ೦ದು ಜಾತಿಗೆ, ಮತಕ್ಕೆ, ಗು೦ಪಿಗೆ, ಒ೦ದು ದೇಶಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಸರ್ವಕಾಲಕ್ಕೂ ಅನ್ವಯವಾಗುವ ಇವು ಮೂಲಮೌಲ್ಯಗಳು. ಈ ಮೌಲ್ಯಗಳು ಮಾನವರನ್ನು ಕೂಡಿಸಿ ಬಾಳಿಸುವತ್ತ ನಡೆದಾವು. ಗು೦ಪುಗಾರಿಕೆಗೆ೦ದೂ ಇವು ತೊಡಗುವುದಿಲ್ಲ; ಅದೇನಿದ್ದರೂ ರಾಜಕೀಯದ ಕರ್ಮ. ವ್ಯಕ್ತಿಸ್ವಾತ೦ತ್ರ್ಯವನ್ನು ನೀಡಿಯೂ ಸಮಷ್ಟಿಯ ಉದ್ಧಾರದ ದೃಷ್ಟಿ ಇದರದು. ಈ ದೃಷ್ಟಿಗೆ ವ್ಯಕ್ತಿಗಳೆಷ್ಟೊ ಅಷ್ಟೂ ಸ೦ಖ್ಯೆಯ ಮತಗಳಿರುವುದು ಸಾಧ್ಯ; ಅಷ್ಟೂ ವ್ಯಕ್ತಿಗಳು ಸಮಷ್ಟಿಯ ವಿಕಾಸಕ್ಕೆ ಸಾದಕವಾಗುವುದೂ ಸಾಧ್ಯ. ಈ ‘ದರ್ಶನ’ವನ್ನೆ ‘ವಿಶ್ವಮಾನವ ಗೀತೆ’ ಸಾರುತ್ತದೆ.
ವಿಶ್ವಮಾನವರಾಗಲು ನಾವು ಸಾಧಿಸಲೇಬೇಕಾದ ಮೂಲಭೂತ ಸ್ವರೂಪದ ತತ್ತ್ವಪ್ರಣಾಳಿಕೆ:
ಸಪ್ತಸೂತ್ರ
- “ಮನುಷ್ಯಜಾತಿ ತಾನೊ೦ದೆ ವಲ೦” ಎ೦ಬುದನ್ನು ನಿರುಪಾಧಿಕವಾಗಿ ಸ್ವೀಕರಿಸಬೇಕು.
- ವರ್ಣಾಶ್ರಮವನ್ನು ತುದ್ದುವುದಲ್ಲ, ಅದನ್ನು ಸ೦ಪೂರ್ಣವಾಗಿ ತೊಲಗಿಸಬೇಕು. ಅ೦ದರೆ ಬ್ರಾಹ್ಮಣ, ಕ್ಷತ್ರಿಯ, ವ್ಯೆಶ್ಯ, ಶೂದ್ರ, ಅ೦ತ್ಯಜ, ಷಿಯಾ, ಸುನ್ನಿ, ಕ್ಯಾಥೊಲಿಕ್, ಪ್ರಾಟಿಸ್ಟ೦ಟ್, ಸಿಕ್, ನಿರ೦ಕಾರಿ ಇತ್ಯಾದಿ ಇತ್ಯಾದಿ ವಿಭಜನೆಯನ್ನು ನಿರ್ನಾಮ ಮಾಡಬೇಕು.
- ಎಲ್ಲ ದೇಶಗಳಲ್ಲಿ ಮತ್ತು ಎಲ್ಲ ಮತಗಳಲ್ಲಿರುವ ಜಾತಿಪದ್ದತಿಯನ್ನು ಸ೦ಪೂರ್ಣವಾಗಿ ನಿರಾಕರಿಸಿ, ವಿನಾಶಗೊಳಿಸಬೇಕು.
- ‘ಮತ’ ತೊಲಗಿ ‘ಅಧ್ಯಾತ್ಮ’ ಮಾತ್ರ ವೈಜ್ಞಾನಿಕ ತತ್ವವಾಗಿ ಮಾನ್ಯತೆ ಪಡೆಯಬೇಕು.
- ಮತ ‘ಮನುಜಮತ’ವಾಗಬೇಕು; ಪಥ ‘ವಿಶ್ವಪಥ’ವಾಗಬೇಕು; ಮನುಷ್ಯ ‘ವಿಶ್ವಮಾನವ’ನಾಗಬೇಕು.
- ಮತ ಗು೦ಪುಕಟ್ಟುವ ವಿಷಯವಾಗಬಾರದು. ಯಾರೂ ಯಾವ ಒ೦ದು ಮತಕ್ಕೂ ಸೇರದೆ, ಪ್ರತಿಯೊಬ್ಬನೂ ತಾನು ಕ೦ಡುಕೊಳ್ಳುವ ‘ತನ್ನ’ ಮತಕ್ಕೆ ಮಾತ್ರ ಸೇರಬೇಕು. ಅ೦ದರೆ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟೇ ಸ೦ಖ್ಯೆಯ ಮತಗಳಿರುವ೦ತಾಗುತ್ತದೆ. ಯಾರೊಬ್ಬರೂ ಇನ್ನೊಬ್ಬರ ಮತಕ್ಕೆ ಸೇರಿ ಗು೦ಪುಕಟ್ಟಿ ಜಗಳ ಹಚ್ಚುವ೦ತಾಗಬಾರದು.
- ಯಾವ ಒ೦ದು ಗ್ರ೦ಥವೂ ‘ಏಕೈಕ ಪರಮ ಪೂಜ್ಯ’ ಧರ್ಮಗ್ರ೦ಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನ ‘ದರ್ಶನ’ವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು
ವಿಶ್ವಮಾನವಗೀತೆ – ಅನಿಕೇತನ
ಓ ನನ್ನ ಚೇತನ,
ಆಗು ನೀ ಅನಿಕೇತನ!
ರೂಪರೂಪಗಳನು ದಾಟಿ,
ನಾಮಕೋಟಿಗಳನು ಮೀಟಿ,
ಎದೆಯ ಬಿರಿಯೆ ಭಾವದೀಟಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!
ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗನ೦ತವಾಗಿ ಏರಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!
ಎಲ್ಲಿಯೂ ನಿಲ್ಲದಿರು;
ಮನೆಯನೆ೦ದೂ ಕಟ್ಟದಿರು;
ಕೊನೆಯನೆ೦ದೂ ಮುಟ್ಟದಿರು;
ಓ ಅನ೦ತವಾಗಿರು!
ಓ ನನ್ನ ಚೇತನ,
ಆಗು ನೀ ಅನಿಕೇತನ!
ಅನ೦ತ ತಾನ್ ಅನ೦ತವಾಗಿ
ಆಗುತಿಹನೆ ನಿತ್ಯಯೋಗಿ;
ಅನ೦ತ ನೀ ಅನ೦ತವಾಗು;
ಆಗು, ಆಗು, ಆಗು, ಆಗು,
ಓ ನನ್ನ ಚೇತನ,
ಆಗು ನೀ ಅನಿಕೇತನ!
-
Archives
- January 2011 (1)
- December 2010 (6)
- July 2010 (14)
- May 2010 (1)
- October 2009 (1)
- September 2009 (4)
- August 2009 (5)
- July 2009 (3)
- June 2009 (2)
- May 2009 (5)
- April 2009 (3)
- February 2009 (3)
-
Categories
- Anand of Akruthi Fonts on Baraha, NUDI and KGP
- Anbarsan on NUDI, KAGAPA and KGP
- Ancient and Medieval Karnataka
- Articles
- Bangalore, Karnataka and Kannada
- Baraha
- Blogroll
- CIIL Kannada
- Classical status to Kannada
- Corruption
- Dasara
- Dr. Rajkumar
- EKAVI
- EKAVI 29 Districts
- EKAVI GULBARGA
- EKAVI SHIMOGA
- EKAVI UTTARA KANNADA
- EKAVI BAGALKOTE
- EKAVI BANGALORE
- EKAVI BANGALORE RURAL
- EKAVI BANGALORE URBAN
- EKAVI BELGAUM
- EKAVI BELLARY
- EKAVI BIDAR
- EKAVI BIJAPUR
- EKAVI CHAMARAJANAGARA
- EKAVI CHICKKAMANGALORE
- EKAVI CHIKKABALLAPUR
- EKAVI CHITRADURGA
- EKAVI COORG-KODAGU
- EKAVI DAKSHINA KANNADA
- EKAVI DAVANGERE
- EKAVI GADAG
- EKAVI HASSAN
- EKAVI HAVERI
- EKAVI Hubli-Dharwad
- EKAVI KOLAR
- EKAVI KOPPAL
- EKAVI MANDYA
- EKAVI MYSORE
- EKAVI RAICHUR
- EKAVI RAMANAGARA
- EKAVI TUMKUR
- EKAVI UDUPI
- EKAVI Activities
- EKAVI College
- EKAVI Colleges
- EKAVI ellaKAVI
- EKAVI functions
- EKAVI Group
- EKAVI Mahithi Hakku -RTI
- EKAVI Meetings and Minutes
- ekavi sabhe
- EKAVI Schools
- EKAVI Suvarna Karnataka Program
- EKAVI USA
- EKAVI YUVAPREMI
- EkaviSUKAPRO
- FESTIVALS
- GOK SCHOOL ADOPTION PROGRAM
- Google Kannada
- Govt. of Karnataka – GoK
- History of Karnataka
- kagapa
- KANNADA
- Kannada and Kannadigas North America
- Kannada and Linux
- Kannada and Open source
- Kannada Blogs
- KANNADA CARTOONS
- Kannada Chair Issues
- Kannada chalavaligalu
- KANNADA CLASS
- KANNADA COOKING
- Kannada DASA SAHITYA
- KANNADA eMagazines ePatrikes
- Kannada Films Screening in USA
- KANNADA FONTS
- Kannada Fonts Developers
- Kannada Fonts Piracy
- Kannada gadegalu
- Kannada Ganaka Parishat
- Kannada Googlepages
- KANNADA GREETINGS
- KANNADA GROUPS
- Kannada Kali of USA
- KANNADA KARNATAKA
- KANNADA KARNATAKA RAJYOTASAVA
- KANNADA kavanas
- Kannada Kootas
- Kannada Kootas, Sanghas – GULF
- Kannada Kootas, Sanghas – SINGAPORE
- Kannada Kootas, Sanghas-New Zealand
- Kannada Kootas,Assocations,Sanghas-CANADA
- KANNADA Kootas,Associations,Sanghas-USA
- KANNADA Language Issues
- KANNADA Learning Centers
- Kannada Lessons
- KANNADA Movies
- Kannada Nadina Prakruthiya Chitragalu
- Kannada News
- Kannada News Articles
- KANNADA On Line
- Kannada on YoUTube
- KANNADA Open Source
- Kannada Pressreleases
- Kannada Radio
- Kannada Related Associations
- KANNADA SAMMELANA
- Kannada Sanghas, Balagas, Kootas – UK
- Kannada Shalegalu
- Kannada Software Development -KSD
- KANNADA Songs
- Kannada Talents
- KANNADA teaching in USA
- KANNADA TV Channels
- KANNADA WEBSITES
- Kannada Writers
- kannaDada bagge
- KANNADAKootas,Associations – AUSTRALIA
- Kannadigas
- Kannadigas Blogs
- KARNATAKA KANNADA DASARA
- Karnataka RTI
- Karnataka World Heritage Sites
- Kavanagalu by Kannadigas
- KAVIGALU
- KDA – Kannada Development Authority
- KGP
- KGP Founder Secretary on KSD issues
- KSD Disscussions
- KSD meetings
- Learn Kannada
- Legends of Karnataka
- Mahithi Hakku
- matagalu, Math
- MUSIC
- Muttukrishnan on KGP, Nudi and KAGAPA
- MYSORE
- Mysore Dasara
- N R I Kannadigas
- nagekoota
- Nanjundappa Report
- NEMMADI-HOBALICENTER
- nisarga – parisara premigala maasika patrike
- Oggattinalli balavide Kannadigare
- ORKUT Kannada
- Pavanaja on NUDI, Baraha and KGP
- Primary Healthcare Centers – PHC's
- Project Shiksha and Microsoft
- RCILTS Kannada
- RTI Act – Mahithi Hakku
- RULERS of MYSORE /Karnataka
- SAMPADA KANNADA
- SAMPIGE Srinivas
- Sarojini Mahishi Report
- Sathyanaryana on NUDI, BARAHA and KGP
- Schools in Karnataka State
- Sheshadri Vasu
- Sheshadrivasu
- Short Stories by Kannadigas
- Spoken Kannada
- Suvarana Karnataka
- Temples of Karnataka
- VASU
- Wikipedia Kannada
- WRITERS in KANNADA
- Yahoo Kannada
- Yakshagana
-
RSS
Entries RSS
Comments RSS