ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ - ಈಕವಿ
ಕನ್ನಡ ಕನ್ನಡಿಗ ಕನ್ನಡಿಗರು ಕರ್ನಾಟಕ
ಬನ್ನಿ ಎಲ್ಲಾ ಕನ್ನಡಿಗರು ಒಂದಾಗಿ ಕನ್ನಡ ಕೆಲಸಕ್ಕೆ ಮುಂದಾಗೋಣ…
ಕನ್ನಡವೇ ಜಾತಿ ಕನ್ನಡವೇ ಧರ್ಮ
ELLA KANNADA ABHIMAANIGALA VEDIKE INTERNATIONAL
……………. …….. EKAVI …………………….
ದಿನಾಂಕ ಜೂನ್ ೧೫ ೨೦೦೮ ,
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ರುವ ಮುಖ್ಯಮಂತ್ರಿ ಚಂದ್ರು ಅವರೇ ,
ಸಮಸ್ತ ಕನ್ನಡಿಗರೆಲ್ಲರಿಗೂ ಇದು ಒಂದು ಸಂತೋಷದ ಸುದ್ದಿ. ಕನ್ನಡಿಗರೆಲ್ಲ ನಿಮ್ಮೊಂದಿಗೆ ಕೆಲಸ ಮಾಡಿ ಕನ್ನಡ ಭಾಷೆ ಯನ್ನು ಕರ್ನಾಟಕ ದಲ್ಲಿ ಕಡ್ಡಾಯವಾಗಿ ಮಾಡಲು ಸಹಕರಿಸುತ್ತೇವೆ.
ಈಕವಿ ಸಂಸ್ಥೆ ಕನ್ನಡ ತಂತ್ರಾಂಶ ದ ಬಗ್ಗೆ ೨೦೦೪ ರಿಂದ ಕೆಲಸ ಮಾಡುತ್ತಾ ಬಂದಿದೆ. ನೀವು ಸಹ ಈಕವಿಯ ೨೦೦೪ ಸಮಾರಂಭ ದಲ್ಲಿ ಬಾಗವಹಿಸಿ ಇದರ ಬಗ್ಗೆ ಮಾತಾಡಿ ದ್ದಿರಿ. ಈಕವಿ ಸದಸ್ಯ ರು ನಿಮ್ಮನು ಬಂದು ನೋಡುತ್ತಾರೆ.
ಈ-ಕವಿ (ಎಲ್ಲ ಕನ್ನಡ ಅಭಿಮಾನಿಗಳ ಅಂತರರಾಷ್ಟ್ರೀಯ ವೇದಿಕೆ) ಸಂಸ್ಥೆಯು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವೈಭವವನ್ನು ಮರಳಿ ಹಿಂತರುವ ಮತ್ತು ಮಾಹಿತಿ ತಂತ್ರಜ್ಞಾನದಂತಹ ಹೊಸ ಕ್ಷೇತ್ರಗಳಲ್ಲಿ ಕನ್ನಡವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಕನ್ನಡ ನಾಡು ನುಡಿಯ ಜನಜೀವನದ ಬಗ್ಗೆ ಚಿಂತನೆ ಕಾಳಜಿಹೊಂದಿರುವ ಈ ಸಂಘಟನೆ ೨೦೦೩ ಅಕ್ಟೋಬರ್ ೪ ರಂದು ಅಮೆರಿಕಾದಲ್ಲಿ ಜನ್ಮತಾಳಿತು. ೨೦೦೪ರ ಜನವರಿಯಲ್ಲಿ ಬೆಂಗಳೂರಿನಲ್ಲಿ ವಿದ್ಯುಕ್ತವಾಗಿ ಕಾರ್ಯಾರಂಭಿಸಿದ ಈ-ಕವಿ ಕರ್ನಾಟಕದಾದ್ಯಂತ ಮತ್ತು ಪ್ರಪಂಚದಾದ್ಯಂತ ತನ್ನ ಚಟುವಟಿಕೆ ವಿಸ್ತರಿಸುತ್ತ ಮುಂದೆ ಸಾಗುತ್ತಿದೆ.
ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ಧಿಗಾಗಿ ಕೆಲಸ ಮಾಡುವುದು ಮತ್ತು ಈ ಕ್ಷೇತ್ರದಲ್ಲಿ ಅವಕಾಶಕ್ಕಾಗಿ ಕಾಯುತ್ತಿರುವ ಸಾವಿರಾರು ಪ್ರತಿಭಾನ್ವಿತ ಕನ್ನಡಿಗರನ್ನು ಗುರುತಿಸಿ ಮುಂದಕ್ಕೆ ತರುವುದು ಈ ಕವಿಯ ಮೂಲ ಉದ್ದೇಶಗಳಲ್ಲಿ ಒಂದಾಗಿದೆ. ಈತ್ತೀಚಿನ ದಿನಗಳಲ್ಲಿ ಕನ್ನಡ ಗಣಕ ತಂತ್ರಾಂಶ ಅಭಿವೃದ್ಧಿಯ ವಿಚಾರವನ್ನುಕೈಗೆತ್ತಿಕೊಂಡಿದ್ದು, ಅದು ಅತ್ಯಂತ ಉಪಯುಕ್ತ ಮತ್ತು ಫಲಕಾರಕ ರೀತಿಯಲ್ಲಿ ಹೊರಬರುವಂತೆ ಮಾಡಲು ಪ್ರಯತ್ನಿಸುತ್ತಿದೆ. ಈ-ಮೇಲ್, ಅಂತರ್ಜಾಲ ಇತ್ಯಾದಿ ಮಾಧ್ಯಮಗಳ ಮೂಲಕ ಜನಗಳಲ್ಲಿ ಕನ್ನಡ ಜಾಗೃತಿಯನ್ನು ಮೂಡಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ.
“ಈ-ಕವಿ” ಸಂಸ್ಥೆಯು ಕನ್ನಡ ನಾಡು-ನುಡಿಗಾಗಿ, ಕನ್ನಡಿಗರಿಗಾಗಿ ಸದಾಕಾಲ ದುಡಿಯಲು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. “ಈ-ಕವಿ” ಸಂಸ್ಥೆಯು ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ದತ್ತುತೆಗೆದುಕೊಳ್ಳುವ, ಬಡ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಕೊಡುವ, ಬಡಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವ, ಕೊಳಗೇರಿ ಪ್ರದೇಶದಲ್ಲಿ ವಾಸಿಸುವ ಮಕ್ಕಳನ್ನು ಭೇಟಿಮಾಡಿ ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಗುರಿಯನ್ನು ಮುಟ್ಟುವ ಸಲುವಾಗಿ “ಈ-ಕವಿ” ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ, ಪ್ರತಿ ತಾಲ್ಲೂಕುಗಳಲ್ಲಿ ಶಾಖೆಗಳನ್ನು ಪ್ರಾರಂಭಿಸುವ ಯೋಜನೆಯಲ್ಲಿ ಕಾರ್ಯಪ್ರವೃತ್ತವಾಗಿದೆ. ಇದರಿಂದ ಬೆಂಗಳೂರಿನಲ್ಲಿ ಮತ್ತು ಹೊರದೇಶದಲ್ಲಿ ವಾಸಿಸುತ್ತಿರುವ ಕನ್ನಡಿಗರಿಗೆ ತಮ್ಮ ತಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ , ಹಳ್ಳಿಗಳ ಬಗ್ಗೆ ಚಿಂತಿಸಿ, ತನ್ನನ್ನು ಬೆಳೆಸಿದ ಊರಿಗೆ ಸಹಾಯ ಮಾಡುವ ಒಂದು ಸುವರ್ಣಾವಕಾಶ “ಈ-ಕವಿ” ಯಲ್ಲಿ ಕಲ್ಪಿತವಾಗಿದೆ.
ಗ್ರಾಮೀಣ ಶಿಕ್ಷಣಕ್ಕೆ ಕಾಯಕಲ್ಪ :
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಹಿಳಾ ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಆ ಪ್ರದೇಶದ ಶಾಲೆಗಳನ್ನು ದತ್ತು ಪಡೆದು ಬಡವರಿಗೆ ಮೈಕ್ರೊ ಕ್ರೆಡಿಟ್ ಸೌಲಭ್ಯ ಒದಗಿಸುವುದು, ಇತ್ಯಾದಿ ಜನಮುಖಿ ಕಾರ್ಯಕ್ರಮಗಳನ್ನು ರಾಜ್ಯದ ಇತರ ಎನ್ಜಿಓಗಳ ಸಹಕಾರದೊಂದಿಗೆ ಹಮ್ಮಿಕೊಳ್ಳುವುದು ಈ ಸಂಸ್ಥೆಯ ಉದ್ದಿಶ್ಯ. ಈ ಸಂಸ್ಥೆಯ ಧ್ಯೇಯ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಮಾರಪ್ಪನಪಾಳ್ಯ ಮೂಲದ ಕನ್ನಡಿಗ. ೧೯೯೮ ರಿಂದ ಅಕ್ಕ ಕೂಟದ ಟ್ರಸ್ಟಿ, ನಿರ್ದೇಶಕರಾಗಿ ಮತ್ತು ಅಕ್ಕ ಕೂಟದ ಫೌಂಡರ್ ಟ್ರಸ್ಟಿಯಾಗಿ ದುಡಿದಿದ್ದೇನೆ. ೨೦೦೦ ರಿಂದ ೨೦೦೨ ರವರಿಗೆ ಅಕ್ಕ ಕೂಟದ ಸಹ ಕಾರ್ಯದರ್ಶಿಯಾಗಿದ್ದೆ. ೨೦೦೩ ನಲ್ಲಿ ಈಕವಿ ಸಂಸ್ಥೆಯನ್ನು ಅಮೆರಿಕಾದಲ್ಲಿ ಸ್ಥಾಪಿಸಿದೆ. ನನ್ನ ಕೆಲವು ಕಾರ್ಯಗಳ ಪರಿಚಯ ಇಲ್ಲಿದೆ…. ಅಮೆರಿಕಾದ ವಿಶ್ವ ವಿದ್ಯಾಲಯವೊಂದರಲ್ಲಿ ಕನ್ನಡ ಪೀಠ ಸ್ಥಾಪಿಸುವುದು ನನ್ನ ಒಂದು ಕನಸು. ಅಮೆರಿಕಾದಲ್ಲಿನ ಎಲ್ಲ ವಿಶ್ವ ವಿದ್ಯಾಲಯಗಳನ್ನು ನಾನು ಸಂಪರ್ಕಿಸಿದ್ದೇನೆ.. ಕನ್ನಡ ಪೀಠ ಸ್ಥಾಪನೆಗೆ ಪೆನ್ಸಿಲ್ವೇನಿಯಾ ವಿಶ್ವ ವಿದ್ಯಾಲಯ ಆಸಕ್ತಿ ತೋರಿಸಿದೆ. ಪೆನ್ಸಿಲ್ವೇನಿಯಾ ವಿವಿ ನೆರವಿನಲ್ಲಿ WE TALKನ್ನುವ ವೆಬ್ ಆಧರಿತ ಕನ್ನಡ ಕಲಿಕೆ ಕಾರ್ಯಕ್ರಮವನ್ನು ರೂಪಿಸಲು ಪ್ರಯತ್ನ ಪಡುತ್ತಿದ್ದೇನೆ. ವಿಶ್ವಾದ್ಯಂತ ಇರುವ ಕನ್ನಡ ಸಂಘಟನೆಗಳನ್ನು ಸಂಪರ್ಕಿಸಿ, ಕರ್ನಾಟಕದ ವಾಣಿಜ್ಯ ಹಾಗೂ ಪ್ರವಾಸೋದ್ಯಮವನ್ನು ಪ್ರೋತ್ರಾಹಿಸುವ ಕಾರ್ಯಕ್ರಮಗಳ ಸಮಾನ ಮಾಧ್ಯಮವನ್ನು ರೂಪಿಸುವ ಪ್ರಯತ್ನ. ಲಾಸ್ ಏಂಜಲೀಸ್ನ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾಲಯದ ಸಾರ್ವಜನಿಕ ಆರೋಗ್ಯ ಇಲಾಖೆ ಹಾಗೂ ಕರ್ನಾಟಕ ಆರೋಗ್ಯ ಕಾರ್ಯಪಡೆ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಿಸುವ ಮೂಲಕ, ಕರ್ನಾಟಕದಲ್ಲಿ ಪ್ರಾಥಮಿಕ ಆರೋಗ್ಯ ಸಂರಕ್ಷಣೆ ಹಾಗೂ ಸಾರ್ವಜನಿಕ ಆರೋಗ್ಯ ಸಂಸ್ಥೆಗಳನ್ನು ಸ್ಥಾಪಿಸುವ ಯೋಜನೆಗೆ ನಾನು ಪ್ರಯತ್ನ ಪಡುತ್ತಿದ್ದೇನೆ.
ಈಕವಿ ಕನ್ನಡ ತಂತ್ರಾಂಶದ ಬಗ್ಗೆ ಏನು ಮಾಡುತ್ತಿದೆ ಎಂದು ನಿಮಗೆ ಗೊತ್ತು. ಶ್ರೀ ಚಂದ್ರಶೇಕರ ಕಂಬಾರ್ ಅವರು ನಿಮಗೆ ಕನ್ನಡ ತಂತ್ರಾಂಶದ ಬಗ್ಗೆ ತಿಳಿಸಿದ್ದಾರೆ. ಶ್ರೀ ಹನುಮಂತಯ್ಯ ನವರು ಸಹ ಇದರಲ್ಲಿ ಸಹಕರಿಸಿದ್ದರು. ನೀವೆಲ್ಲ ಸೇರಿಕೊಂಡು ಸದನದಲ್ಲಿ ಕನ್ನಡ ತಂತ್ರಾಂಶದ ಬಗ್ಗೆ ದ್ವನಿ ಎತ್ತಿದ್ದಿರಿ. ಇದೆಲ್ಲ ನಡೆದಿರುವ ಸಂಗತಿ. ನಿಮಗೆ ಗೊತ್ತು.
ಈಕವಿಯ ಕೋರಿಕೆ ಏನಂದರೆ, ನೀವು ೨೦೦೪ ರಲ್ಲಿ ಕನ್ನಡ ತಂತ್ರಾಂಶ ವಿಷಯ ಪ್ರಸ್ಥಾಪಿಸಿದ್ದನ್ನು ಮುಂದುವರಿಸಬೇಕೆಂದು ಕೇಳಿ ಕೊಳ್ಳುತ್ತೇವೆ.
ಈಕವಿ ಟ್ರಸ್ಟ್ , ಕನ್ನಡ ತಂತ್ರಾಂಶದಲ್ಲಿ ಆಗಿರುವ ತಪ್ಪು ದೊರನೆಗಳನ್ನು ಸರಿ ಪಡಿಸಲು ಹೋರಾಡುತ್ತಿದೆ.
ಈಕವಿಯು, ಕನ್ನಡಿಗರಿಗೆ, ಕರ್ನಾಟಕ ಸರಕಾರಕ್ಕೆ ಮತ್ತು ಕನ್ನಡ ಪರ್ತಕರ್ತರಿಗೆ, ಕನ್ನಡ ತಂತ್ರಾಂಶ ದಲ್ಲಿ ಆಗಿರುವ ತಪ್ಪನ್ನು, ಅಂತರ್ಜಾಲದ ಮೂಲಕ, ದೂರವಾಣಿ ಮೂಲಕ, ಅಂಚೆ ಮೂಲಕ ಮತ್ತು ಪತ್ರಿಕಾಗೊಸ್ಟಿಯಲ್ಲಿ ತಿಳಿಸುತ್ತಾ ಇದೆ.
ಈಕವಿ ಎಲ್ಲ ಪತ್ರಕರ್ತರಿಗು ಕನ್ನಡ ತಂತ್ರಾಂಶ ದ ಬಗ್ಗೆ ಏನು ಆಗಿದೆ ಅಂಥ ಬೇರೆಯವರು ಅಂದರೆ ಪವನಜ, ತೇಜಸ್ವಿ, ಶೇಷಾದ್ರಿವಾಸು, ಸತ್ಯನಾರಾಯಣ, ಅನ್ಬರ್ಸನ್, ಮುತ್ತುಕ್ರಿಷ್ಣನ್, ಆನಂದ, ಹಳೆಮನೆ, ಸಂಪಿಗೆ ಶ್ರೀನಿವಾಸ್, ಕಂಬಾರ, ಹನುಮಂತಯ್ಯ, ಮತ್ತು ಇತರರು ಬರೆದಿದ್ದರಲ್ಲ, ಆದನ್ನು ಕಾಪಿ ಮಾಡಿ ಕೊಡುತ್ತಿದೆ.
ಈಕವಿ, ಪತ್ರಿಕಾ ಗೊಸ್ಟಿಯಲ್ಲಿ ತಿಳಿದುಕೊಂಡಿದ್ದು ಏನಂದರೆ ಪತ್ರಕರ್ಥರಿಗೆ ನುಡಿ ಮತ್ತು ಬರಹ ತಂತ್ರಾಂಶ ಗಳು ಕದ್ದು ಮಾಡಿರುವುದು ಎಂದು ಗೊತ್ತೆ ಇಲ್ಲ. ಪತ್ರಕರ್ಥರಿಗೆ, ಶೇಷಾದ್ರಿ ವಾಸು ಆಕೃತಿ ತಂತ್ರಾಂಶ ದಿಂದ ಕದ್ದು ಬರಹ ತಂತ್ರಾಂಶ ಮಾಡಿದ್ದಾನೆ ಎಂದು ಗೊತ್ತೆ ಇಲ್ಲ. ಪತ್ರಕರ್ಥರಿಗೆ, ಕನ್ನಡ ಗಣಕ ಪರಿಷತ್ ನುಡಿ ತಂತ್ರಾಂಶ ವನ್ನು ಬರಹ ತಂತ್ರಾಂಶ ದಿಂದ ಕದ್ದು ಮಾಡಿ ಕರ್ನಾಟಕ ಸರಕಾರಕ್ಕೆ ಮಾರಿದ್ದಾರೆ ಅಂಥ ಗೊತ್ತೆ ಇಲ್ಲ. ಪತ್ರಕರ್ಥರಿಗೆ, ಈಕವಿ ಪತ್ರಿಕಾಗೊಸ್ಟಿಯಲ್ಲಿ ಇದೆನೆಲ್ಲ ಕೇಳಿ ಆಶ್ಚರ್ಯ ಪಡುತ್ತಿದ್ದರು.
ಈಕವಿ, ಎಲ್ಲ ಜಿಲ್ಲಾ ಪತ್ರಕರ್ತರಿಗು ಮತ್ತು ಕನ್ನಡಿಗರಿಗೂ ಕನ್ನಡ ತಂತ್ರಾಂಶದ ಬಗ್ಗೆ ತಿಳಿಸುತ್ತಾ ಮತ್ತು ಮುಂದಕ್ಕೆ ಏನು ಸರಿ ಮಾಡಬೇಕೆಂದು ತಿಳಿಸುತ್ತಾ ಇದೆ.
ಈಕವಿ ಮತ್ತು ತೇಜಸ್ವಿ
ಸಾಹಿತಿಗಳಲ್ಲಿ , ಕನ್ನಡ ತಂತ್ರಾಂಶದ ಬಗ್ಗೆ ಯೋಚಿಸಿದವರು ಮತ್ತು ಅರ್ಥ ಮಾಡಿಕೊಂಡಿದ್ದವರಲ್ಲಿ , ಶ್ರೀ ಪೂರ್ಣಚಂದ್ರ ತೇಜಸ್ವಿ ಯವರು. ಇವರು ಒಬ್ಬರೇ.
ಶ್ರೀ ತೇಜಸ್ವಿ ಯವರು ಬರೆದ ಕನ್ನಡ ಸಾಫ್ಟ್ವೇರ್ ಗಳ ಇತಿಹಾಸ ವನ್ನು ನೀವು ಓದಬೇಕು. ನಿಮಗೆ ಎಲ್ಲ ಗೊತ್ತಾಗುತ್ತೆ ಕನ್ನಡ ತಂತ್ರಾಂಶದ ಬಗ್ಗೆ. ಶ್ರೀ ತೇಜಸ್ವಿ ಯವರು ಈಕವಿ ಗೆ ಮತ್ತು ನನಗೆ ಬರೆದ ಪತ್ರಗಳನ್ನು ನೀವು ಓದಬೇಕು. ಈಕವಿ ಸದಸ್ಯರು ಇದನ್ನು ಕೊಡುತ್ತಾರೆ ನಿಮಗೆ.
ಕನ್ನಡಿಗರಿಂದ ಕನ್ನಡಕ್ಕೆ ಅನ್ಯಾಯ.
ಕನ್ನಡ ಭಾಷೆಯ ಬೆಳವಣಿಗೆಗೆ ದೊಡ್ಡ ಕೊಡಲಿ ಪೆಟ್ಟು ಆಗಿರೋದು ಶೇಷಾದ್ರಿವಾಸು ಇಂದ. ಯಾಕೆಂದರೆ, ವಾಸು ಆಕೃತಿ ಫಾಂಟ್ಸ್ ೧೯೯೭ ನಲ್ಲಿ ಕದ್ದು ಬರಹ ಮಾಡಿದ್ದಾನೆ. ಇದನ್ನು ವಾಸುನೆ ಜುಲೈ ೨೦೦೪ ರಲ್ಲಿ ಒಂದು ಈಮೇಲ್ ಬರೆದು ತಿಳಿಸಿದ್ದಾನೆ. ಬರಹ ಕದ್ದು ಮಾಡಿದ್ದು ಅಂಥ ವಾಸುನೆ ಒಪ್ಪಿಕೊಂಡಿದ್ದಾನೆ. ವಾಸು ಕದ್ದು ಬರಹ ೧.೦ ಮಾಡಿಲ್ಲದೆ ಹೋದರೆ, ಮುಂದಿನ ಬರಹ ೨.೦ , ೩.೦, ೪.೦, ೫.೦, ೬.೦, ೭.೦, ಮಾಡುವುದಕ್ಕೆ ಆಗುತ್ತಿರಲಿಲ. ವಾಸು ಏನು ಏನು ಮಾಡುತ್ತಿದ್ದನೋ ಅದೆಲ್ಲ ಕದ್ದು ಮಾಡಿದಂಗೆ ಆಗುತ್ತದೆ.
ಕನ್ನಡ ಗಣಕ ಪರಿಷತ್ ಶೇಷಾದ್ರಿವಾಸು ಕದ್ದು ಮಾಡಿದ ಬರಹ ತಂತ್ರಾಂಶವನ್ನು ಉಪಯೋಗಿಸಿಕೊಂಡು ಕಲಿತ ಎಂಭ ತಂತ್ರಾಂಶದಲ್ಲಿ ಸೇರಿಸಿ ಅಮೇಲೆ ಅದಕ್ಕೆ ನುಡಿ ಅಂಥ ಹೆಸರುಕೊಟ್ಟು ಕರ್ನಾಟಕ ಸರಕಾರಕ್ಕೆ ದುಡ್ಡು ಪಡೆದು ಮಾರಿದೆ.
ವಾಸು ಬರಹ ಕದ್ದು ಮಾಡಿ, ಕನ್ನಡ ಗಣಕ ಪರಿಷತ ಗೆ ಬರಹ ತಂತ್ರಾಂಶ ವನ್ನು ಉಪಯೋಗಿಸಲು ಕೊಡದೆ ಇದಿದ್ದರೆ , ಕಲಿತ ತಂತ್ರಾಂಶ ವನ್ನು ಮಾಡಲು ಕನ್ನಡ ಗಣಕ ಪರಿಷತ್ ಗೆ ಆಗುತ್ತಿರಲಿಲ್ಲ ಮತ್ತು ನುಡಿ ತಂತ್ರಾಂಶನು ಕರ್ನಾಟಕ ಸರಕಾರಕ್ಕೆ ಮಾರುವುದಕ್ಕೆ ಆಗುತ್ತಿರಲಿಲ್ಲ.
ನುಡಿ ಮತ್ತು ಬರಹ ತಂತ್ರಾಂಶ ಬರುವುದಕ್ಕೆ ಮೊದಲು ಕರ್ನಾಟಕ ಸರ್ಕಾರ ಕಚೇರಿಗಳಲ್ಲಿ ಕನ್ನಡ ತಂತ್ರಾಂಶ ವನ್ನು ಉಪಯೋಗಿಸುತ್ತಿದ್ದರು. ೨೪ ಕನ್ನಡ ತಂತ್ರಾಂಶ ತಯಾರಿಕರು ಇದ್ದರು. ಈಗ ಎಸ್ಟು ಇದ್ದರೆ ಅಂಥ ಲೆಕ್ಕ ಹಾಕಬೇಕು?
ನುಡಿ ಮತ್ತು ಬರಹ ಕನ್ನಡ ತಂತ್ರಾಂಶ ಬರುವುದಕ್ಕೆ ಮೊದಲು, ಒಬ್ಬ ಕನ್ನಡ ತಂತ್ರಾಂಶ ತಯಾರಿಕರು ಕರ್ನಾಟಕ ಸರ್ಕಾರಕ್ಕೆ , ಅವರ ಕನ್ನಡ ತಂತ್ರಾಂಶ ವನ್ನು , ಕರ್ನಾಟಕ ಸರ್ಕಾರ ಕಚೇರಿಗಳಲ್ಲಿ ಉಚಿತ ವಾಗಿ ಉಪಯೋಗಿಸಬಹುದು ಎಂದು ೧೯೯೭ ನಲ್ಲಿ ಪತ್ರ ಬರೆದಿದ್ದರು. ಈ ಕನ್ನಡ ತಂತ್ರಾಂಶ ವನ್ನು ಕರ್ನಾಟಕ ಸರ್ಕಾರದಲ್ಲಿ ಆಗಲೇ ಕಚೇರಿಗಳಲ್ಲಿ ಉಪಯೋಗಿಸುತ್ತಿದ್ದರು.
ಕನ್ನಡ ಗಣಕ ಪರಿಷತ್ ಗೆ ಕನ್ನಡ ತಂತ್ರಾಂಶ ಮಾಡುವ ವಿದಾನವೇ ಗೊತ್ತಿಲ್ಲ ಮತ್ತು ಗೊತ್ತಿರಲಿಲ್ಲ.
ಕನ್ನಡ ಗಣಕ ಪರಿಷತ್ ಒಂದು ಹವ್ಯಾಸಿ ಸಂಸ್ಥೆ ಅಂಥ ತೇಜಸ್ವಿ ಯವರೇ ಹೇಳಿದ್ದಾರೆ.
ಕನ್ನಡ ಗಣಕ ಪರಿಷತ್, ನುಡಿ ತಂತ್ರಾಂಶ ಕದ್ದು ಮಾಡುವುದಕ್ಕೆ ಕಾರಣ ಬರಹ ವಾಸು.
ಕನ್ನಡ ಗಣಕ ಪರಿಷತ್ ಗೆ ನುಡಿ ತಂತ್ರಾಂಶ ಮಾಡಲು ಕರ್ನಾಟಕ ಸರ್ಕಾರ ೩೫ ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದ್ದರು. ಈ ದುಡ್ಡು ಯಾರು ಯಾರಿಗೆ ಹೋಗಿದೆ ಅಂಥ ಕರ್ನಾಟಕ ಸರ್ಕಾರ ಯಾಕೆ ಹೇಳುತ್ತಿಲ್ಲ. ಇದರಲ್ಲಿ ಗುಟ್ಟು ಏನು ? ಕನ್ನಡ ಗಣಕ ಪರಿಷತ್ ನವರಿಗೆ ಈ ದುಡ್ಡು ಎನ್ ಆಗಿದೆ ಅಂಥ ಗೊತ್ತು. ಕನ್ನಡ ಗಣಕ ಪರಿಷತ್ ಯಾಕೆ ಏನು ಹೇಳುತ್ತಿಲ್ಲ?
ಕರ್ನಾಟಕ ಸರಕಾರ ದಿಂದ ದುಡ್ಡು ತೆಗೆದು ಕೊಂಡ, ಕನ್ನಡ ಗಣಕ ಪರಿಷತ್ ಯಾಕೆ ನಾವು ಕನ್ನಡಕ್ಕೆ ಉಚಿತ ಸೇವೆ ಮಾಡುತ್ತಿದ್ದೇವೆ ಅಂಥ ಸುಳ್ಳು ಹೇಳಿಕೊಂಡು ಓಡಾಡಬೇಕು?
ಕನ್ನಡ ಗಣಕ ಪರಿಷತ್ ಕರ್ನಾಟಕ ಸರ್ಕಾರ ವನ್ನು ತಪ್ಪು ದಾರಿ ಗೆ ಹೇಳೆದಿದ್ದಾರೆ. ಕನ್ನಡ ಗಣಕ ಪರಿಷತ್, ಕನ್ನಡ ತಂತ್ರಾಂಶ ವನ್ನು ನಾವೇ ಮಾಡಿದ್ದೇವೆ ಅಂಥ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ.
ಕನ್ನಡ ಗಣಕ ಪರಿಷತ್ ಕರ್ನಾಟಕ ಸರ್ಕಾರ ವನ್ನು ತಪ್ಪು ದಾರಿ ಗೆ ಹೇಳೆದಿದ್ದಾರೆ ಮತ್ತು ಕನ್ನಡ ತಂತ್ರಾಂಶ ವನ್ನು ನಾವೇ ಮಾಡಿದ್ದೇವೆ ಅಂಥ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ.
ಕನ್ನಡ ಗಣಕ ಪರಿಷತ್ ಗೆ ತಂತ್ರಾಂಶ ಅಂದರೆ ಏನು ಅಂಥ ನು ಗೊತ್ತಿರಲಿಲ್ಲ ಮತ್ತು ಎಲ್ಲರ ಕಣ್ಣಿಗೆ ಮಣ್ಣು ಎರಚಿದ್ದಾರೆ.
ಕನ್ನಡ ಗಣಕ ಪರಿಷತ್ ಗೆ ಕರ್ನಾಟಕ ಸರ್ಕಾರ ದುಡ್ಡು ಕೊಟ್ಟು ಹೊಸ ಕನ್ನಡ ತಂತ್ರಾಂಶ ಮಾಡಿ ಅಂಥ ಹೇಳಿದ್ದು. ಈಗ ಕನ್ನಡ ಗಣಕ ಪರಿಷತ್ ಕದ್ದು ಮಾಡಿರುವ ನುಡಿ ಕನ್ನಡ ತಂತ್ರಾಂಶ ವನ್ನು ಕರ್ನಾಟಕ ಸರಕಾರಕ್ಕೆ ಕೊಟ್ಟಿದ್ದಾರೆ. ಕನ್ನಡ ಗಣಕ ಪರಿಷತ್ ಕನ್ನಡಿಗರಿಗೆ ಮತ್ತು ಕರ್ನಾಟಕ ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ಕನ್ನಡ ಗಣಕ ಪರಿಷತ್ ಅನ್ನು ಕರ್ನಾಟಕ ಸರ್ಕಾರ ದವರು ದೂರ ಇಡಬೇಕು.
ಕರ್ನಾಟಕ ಸರ್ಕಾರ, ನುಡಿ ತಂತ್ರಾಂಶ ವನ್ನು ಎಲ್ಲ ಸರ್ಕಾರ ಕಚೇರಿಯಲ್ಲಿ ಕಡ್ಡಾಯವಾಗಿ ಉಪಯೋಗಿಸಬೇಕೆಂದು ಪತ್ರ ಬರೆದಿದ್ದಾರೆ. ಕರ್ನಾಟಕ ಸರ್ಕಾರ ಬೇರೆ ಕನ್ನಡ ತಂತ್ರಾಂಶ ತಯಾರಿಕರಿಗೆ ಮೋಸ ಮಾಡಿದ್ದಾರೆ.
ಕನ್ನಡ ಆಡಳಿತ ಭಾಷೆ ಆಗಬೇಕಾದರೆ ಕನ್ನಡ ತಂತ್ರಾಂಶ ಅಭಿವೃದ್ದಿ ಆಗಲೇಬೇಕು ಕರ್ನಾಟಕ ಸರಕಾರದಲ್ಲಿ.
ಕನ್ನಡವನ್ನು ತಂತ್ರಾಂಶ ದಾಲ್ಲಿ ಸರಿಯಾಗಿ ಅಳವಡಿ ಸದೇಹೊದರೆ, ಕನ್ನಡ ಆಡಳಿತ ಭಾಷೆ ಆಗುವುದು ಕಸ್ಟ ಆಗುತ್ತೆ. ಕರ್ನಾಟಕ ಸರ್ಕಾರದಲ್ಲಿ ಈಗ ಆಗಿರುವ ತಪ್ಪನೆಲ್ಲ ಸರಿಪಡಿಸಬೇಕು.
ಕನ್ನಡ ವನ್ನು ಸರಿಯಾಗಿ ತಂತ್ರಾಂಶ ದಲ್ಲಿ ಅಳವಡಿಸಿದರೆ, ಜಿಲ್ಲಾ, ತಾಲೂಕು , ಹೋಬಳಿ, ಹಳ್ಳಿ ಮತ್ತು ಎಲ್ಲ ಕನ್ನಡಿಗರು ಚೆನ್ನಾಗಿ ಮುಂದೆ ಬರುತ್ತಾರೆ.
ಜಿಲ್ಲೆ, ತಾಲೂಕು, ಹೋಬಳಿ, ಮತ್ತು ಹಳ್ಳಿ ಗಳ, ಕನ್ನಡಿಗರ ಮಕ್ಕಳು ಕನ್ನಡದಲ್ಲಿ ಓದಿ ಮುಂದೆ ಬರುವುದಕ್ಕೆ ಕಸ್ಟ ಆಗುತ್ತಿದೆ. ಇದನೆಲ್ಲ ನಾವು ಗಮನಿಸಬೇಕು. ಇವರೆಲ್ಲ ಬೆಂಗಳುರಿಗೆ ಕೆಲಸ ಹುಡುಕಲು ಬಂದ್ಗ ಎಸ್ಟು ಕಸ್ಟ ಪಡುತ್ತಾರೆ ಅಂಥ ನಾವೆಲ್ಲ ಗಮನಿಸಿ ಒಂದು ದಾರಿ ತೋರಿಸಬೇಕು.
ಕರ್ನಾಟಕ ಸರ್ಕಾರ ದಲ್ಲಿ, ಕನ್ನಡ ಆಡಳಿತ ದಲ್ಲಿ ಕಡ್ಡಾಯ ವಾಗ ಬೇಕಾದರೆ, ಕನ್ನಡ ತಂತ್ರಾಂಶ ಸರಿಪಡಿಸಬೇಕು. ಕನ್ನಡಿಗರಿಗೆ ಇದೆ ಮೊದಲನೆಯ ಕೆಲಸ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇದೆಲ್ಲವನ್ನೂ ಜಾರಿಗೆ ತರಬೇಕು.
ಈ ಆಡಳಿತ ದಲ್ಲಿ ಎಲ್ಲ ಕಡೆ, ಅಂದರೆ, ವಿಧಾನ ಸೌಧ ಇಂದ ಎಲ್ಲ ಹಳ್ಳಿ ಯವರಿಗೆ, ಕನ್ನಡ ಕಡ್ಡಾಯವಾಗಿ ಇರಬೇಕಾದರೆ ಕರ್ನಾಟಕ ಸರ್ಕಾರದಲ್ಲಿ , ಕನ್ನಡ ತಂತ್ರಾಂಶ ವನ್ನು ಸರಿ ಪಡಿಸಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇದೆಲ್ಲವನ್ನೂ ಸರಿ ಪಡಿಸಬೇಕು.
ಕನ್ನಡಿಗರು, ನಾವೆಲ್ಲ ಸೇರಿ ಇದಕ್ಕೆ ಏನು ಮಾಡಬೇಕೆಂದು ಒಂದು ದಾರಿ ನೋಡಬೇಕು.
ಚಾರಿತ್ರಿಕ ತಿರುವಿನಲ್ಲ್ಲಿ ಕನ್ನಡ ಭಾಷೆಯ ಭವಿಷ್ಯ.
ಆದುನಿಕ ಯುಗದಲ್ಲಿ ಕನ್ನಡದ ಸ್ಥಿತಿ ಗತಿಗಳನ್ನು ಕನ್ನಡಿಗರು ಗಮನಿಸಬೇಕು.
ಕರ್ನಾಟಕ ಸರ್ಕಾರದ ತಪ್ಪು ಧೋರಣೆಗಳು.
ಕನ್ನಡ ತಂತ್ರಾಂಶಕ್ಕೆ ಆಗಿರುವ ತೊಂದರೆಗಳನ್ನು ಸರಿಪಡಿಸಬೇಕು.
ಕರ್ನಾಟಕ ಸರ್ಕಾರ ಏನು ಮಾಡಬೇಕು ?
ಕರ್ನಾಟಕ ಸರ್ಕಾರವು ಮೊದಲನೆಯದಾಗಿ, “ನುಡಿ” ತಂತ್ರಾಂಶವನ್ನೇ ಬಳಿಸಲೇಬೇಕು ಎಂಭ ಆದೇಶವನ್ನು ಹಿಂತೆಗೆದುಕೊಳ್ಳಬೇಕು.
ಕನ್ನಡ ಗಣಕ ಪರಿಷತ್ ಗೆ ಕರ್ನಾಟಕ ಸರ್ಕಾರ ಕೊಟ್ಟಿರುವ ಸ್ಥಾನ ಮಾನ ವನ್ನು ತೆಗೆದು ಹಾಕಬೇಕು.
ಕರ್ನಾಟಕ ಸರ್ಕಾರದಲ್ಲಿ ಈಗ ಆಗಿರುವ ತಪ್ಪನೆಲ್ಲ ಸರಿಪಡಿಸಬೇಕು.
ಕರ್ನಾಟಕ ಸರಕಾರವನ್ನು ಕನ್ನಡ ಗಣಕ ಪರಿಷತ್ ತಪ್ಪು ದಾರಿಗೆ ಎಳೆದಿದೆ. ಇದನ್ನು ಸರಿಪಡಿಸಬೇಕು.
“ನುಡಿ” ತಂತ್ರಾಂಶ ವನ್ನು ಮುಕ್ತವಾಗಿ ಉಪಯೋಗಿಸಲು “ನುಡಿ” ಸೋರ್ಸ್ ಕೋಡ್ ಅನ್ನು ಅಂತರ್ಜಾಲದಲ್ಲಿ ಹಾಕಿದರೆ, ಎಲ್ಲರು ಸೇರಿ ಇದನ್ನು ಅಭಿವೃದ್ದಿ ಪಡಿಸಬಹುದು. ಕನ್ನಡ ಗಣಕ ಪರಿಷತ್ “ನುಡಿ” ತಂತ್ರಾಂಶ ವನ್ನು ಕರ್ನಾಟಕ ಸರಕಾರಕ್ಕೆ ಮಾರಿದ್ದರು ಯಾಕೆ ಒಪ್ಪುತ್ತಿಲ್ಲ ಇದಕ್ಕೆ? ಕರ್ನಾಟಕ ಸರಕಾರ ಯಾಕೆ ಮಾಡುತ್ತಿಲ್ಲ ಇದನ್ನು?
ಕರ್ನಾಟಕ ಸರ್ಕಾರ ತಾಂತ್ರಿಕ ಸಲಹಾ ಸಮಿತಿ ನೇಮಿಸಬೇಕು.
ಈ ಸಮಿತಿಯಲ್ಲಿ ತಂತ್ರಜ್ಞಾನ ಬಲ್ಲ ಸಾಹಿತಿಗಳು, ಕಂಪ್ಯೂಟರ್ ತಜ್ಞರು, ಭಾಷಾ ತಜ್ಞರು, ಪತ್ರಿಕಾ ಸಂಪಾದಕರು, ಮುದ್ರಕರು, ಕನ್ನಡ ತಂತ್ರಾಂಶ ತಯಾರಕರು, ವ್ಯಾಕರಣ ಶಾಸ್ತ್ರಜ್ಞರು, ಪ್ರಕಾಶಕರು, ಸಾಹಿತ್ಯ ಪರಿಣಿತರು, ಪತ್ರಿಕೋಧ್ಯಮಿಗಳು, ಉಚ್ಛಾರಣಾ ತಜ್ಞರು, ಕನ್ನಡ ಪ್ರಾಧ್ಯಾಪಕರು, ಸರಕಾರದ ಅದಿಕಾರಿಗಳು, ವಿಮರ್ಶಕರು, ನಿಘಂಟು ತಜ್ಞರು, ಮಾಹಿತಿ ತಂತ್ರಜ್ಞರು ಮತ್ತು ಉದ್ದಿಮೆದಾರರು, ಇರಬೇಕು.
ಕನ್ನಡಿಗರು ಗಮನಿಸಬೇಕಾದ ವಿಷಯಗಳು
ಎಸ್ಟೇ ಕನ್ನಡ ವೆಬ್ ಸೈಟ್ ಮತ್ತು ಕನ್ನಡ ಬ್ಲಾಗ್ ಗಳು ಇದ್ದರೂ, ಕನ್ನಡ ಆಡಳಿತ ಭಾಷೆ ಆಗುವುದಿಲ್ಲ.
“ನುಡಿ” ಕನ್ನಡ ತಂತ್ರಾಂಶವನ್ನು ಜನರಿಗೆ ಉಚಿತವಾಗಿ ಕೊಟ್ಟರೂ, ಕನ್ನಡ ಆಡಳಿತ ಭಾಷೆ ಆಗುವುದಿಲ್ಲ.
ಕನ್ನಡ ವೆಬ್ ಸೈಟ್ ಮತ್ತು ಕನ್ನಡ ಬ್ಲಾಗ್ ಗಳಿಂದ ಕನ್ನಡ ಭಾಷೆ ಉಳಿಯುವುದಿಲ್ಲ.
ಕನ್ನಡ ಭಾಷೆ ಉಳಿಯುವುದು ಕಥೆ-ಕಾದಂಬರಿ ಇಂದ ಅಲ್ಲ.
ಕನ್ನಡ ಭಾಷೆ ಉಳಿಯಬೇಕಾದರೆ ಕನ್ನಡ ಬಳಿಕೆ ಜಾಸ್ತಿ ಯಾಗಬೇಕು. ಕನ್ನಡ ತಂತ್ರಾಂಶ ವನ್ನು ಸರಿ ಪಡಿಸಬೇಕು. ಕನ್ನಡ ತಂತ್ರಾಂಶ ಬಳಕೆಯು ಕನ್ನಡ ಭಾಷೆಯನ್ನು ಉಳಿಸುತ್ತದೆ. ನಾವೆಲ್ಲ ಸೇರಿ ಮಾಡಬೇಕಾದ ಕೆಲಸ ಕನ್ನಡ ತಂತ್ರಾಂಶದ ಸರಿ ಪಡಿಸಬೇಕಾದ ಕೆಲಸ. ಇದನ್ನು ನಾವೆಲ್ಲ ಯೋಚನೆ ಮಾಡಿ ಮಾಡಬೇಕು.
ಯಾವ ಪತ್ರಕರ್ತ್ತರು ಕನ್ನಡ ತಂತ್ರಾಂಶ ದಲ್ಲಿ ಏನು ಆಗಿದೆ ಅಂಥ ಬರೆದಿದ್ದಾರೆ ?
ಯಾವ ಪತ್ರಕರ್ತ್ತರು ಕರ್ನಾಟಕ ಸರಕಾರವನ್ನು ಕನ್ನಡ ತಂತ್ರಾಂಶ ಬಗ್ಗೆ ಕೇಳಿದ್ದಾರೆ ?
ಪತ್ರಕರ್ತ್ತರು, ಕನ್ನಡ ಗಣಕ ಪರಿಷತ್ ಅನ್ನು ಯಾಕೆ ಇನ್ನು ಕೇಳಿಲ್ಲ ? ನುಡಿ ಕನ್ನಡ ತಂತ್ರಾಂಶದ ಬಗ್ಗೆ ? ನುಡಿ ಕದ್ದಿದ್ದೋ ಅಲ್ವ ಅಂಥ ? ನುಡಿ ಕನ್ನಡ ತಂತ್ರಾಂಶ ವನ್ನು ಯಾಕೆ ಓಪನ್ ಸೋರ್ಸ್ ಹಾಕಿಲ್ಲ ಅಂಥ ಕೇಳಿದ್ದಾರ ?
ಯಾವ ಪತ್ರ ಕರ್ತ್ತರು ಕದ್ದು ಮಾಡಿದ ನುಡಿ ಕನ್ನಡ ತಂತ್ರಾಂಶವನ್ನು, ಕರ್ನಾಟಕ ಸರಕಾರಕ್ಕೆ ಮಾರಿದ ಕನ್ನಡ ಗಣಕ ಪರಿಷತ್ತನ್ನು ಯಾಕೆ ಇನ್ನು ಪ್ರಶ್ನೆ ಮಾಡಿಲ್ಲ?
ಪತ್ರಕರ್ತ್ತರು, ಎಲ್ಲರೂ ಬರೆದಿರುವ ಪತ್ರಗಳನ್ನ್ಜು ಓದಿ, ಕನ್ನಡ ತಂತ್ರಾಂಶಕ್ಕೆ ಏನು ತೊಂದರೆಗಳು ಆಗಿದೆ ಅಂಥ , ಎಲ್ಲ ಜನರಿಗೆ ತಿಳಿಸಿದ್ದಾರ ?
ಕರ್ನಾಟಕದಲ್ಲಿ ಕವಿಗಳು ಮತ್ತು ಸಾಹಿತಿಗಳು ಕನ್ನಡ ತಂತ್ರಾಂಶ ಕ್ಕೆ ಏನು ಏನು ತೊಂದರೆ ಆಗಿದೆ ಅಂಥ ಯಾಕೆ ನೋಡುತ್ತಿಲ್ಲ ?
ಕನ್ನಡ ಆಡಳಿತ ಭಾಷೆ ಆಗುವುದಕ್ಕೆ ಏನು ತೊಂದರೆಗಳು ಇದೆ ಅಂಥ ಯಾಕೆ ನೋಡುತ್ತಿಲ್ಲ ?
ಕರ್ನಾಟಕದಲ್ಲಿ ಇರುವ ಕವಿಗಳು ಮತ್ತು ಸಾಹಿತಿಗಳು ಕರ್ನಾಟಕ ಸರಕಾರವನ್ನು ಇನ್ನು ಯಾಕೆ ಕನ್ನಡ ತಂತ್ರಾಂಶದ ಬಗ್ಗೆ ಪ್ರಶ್ನೆ ಕೇಳಿಲ್ಲ್ಲ?
ಕನ್ನಡ ಅಭಿವೃದ್ದಿ ಪ್ರದಿಕಾರ, ಕನ್ನಡ ತಂತ್ರಾಂಶದ ಬಗ್ಗೆ ಏನು ಮಾಡುತ್ತಿದೆ ? ಕನ್ನಡ ಸಾಹಿತ್ಯ ಪರಿಷತ್, ಕನ್ನಡ ತಂತ್ರಾಂಶದ ಬಗ್ಗೆ ಏನು ಮಾಡುತ್ತಿದೆ ?
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಕನ್ನಡ ತಂತ್ರಾಂಶದ ಬಗ್ಗೆ ಏನು ಮಾಡುತ್ತಿದೆ ?
ನಿಮ್ಮ ,
ನೊಂದ ಕನ್ನಡಿಗ
ವೆಂಕಟಪ್ಪ ಕುಮಾರಸ್ವಾಮಿ
೯೯೭೨೨ ೧೦೪೧೩