Angai-Kannadadalli e-Jagattu
This is the maiden effort of Village Multimedia to teach computers through animation, graphics and voice. As a first step towards the same, “Angai-Kannadadalli e-Jagattu” a CD has been created. In this CD there is about 17 hours of description along with animation. This has been done through 120 questions. Such method of teaching computers in Kannada is first of its kind. Using this CD even an individual who is not at all computer literate can learn computers very easily. This CD has descriptive information about windows, internet, hardware and computer vocabulary. This is helpful to the rural folk as well as people with less knowledge of English.
This CD can be used as a self learning tool for and by students, teachers and rural people. So, I request you to support us by buying this CD for your personal use and library. If you have any programme of taking computer technology to the rural areas, this CD can be of sure utility.
Thanking you,
Yours sincerely,
From ,
Village Multimedia
No. 491, 2nd Cross,
Vidyanagar, South Extension,
Chikkanayakanahalli-572214
Tumkur (D), Karnataka
Mobil : 9343220238
Chikmagalur on line
http://www.onlinechikmagalur.com/
NARASARAJA, WRESTLER KING OF MYSORE
|
||
http://www.starofmysore.com/main.asp?type=specialnews&item=2987
Activities Albums, Articles,
“ಈ-ಕವಿ” ಸಂಸ್ಥೆಯು ಕನ್ನಡನುಡಿಗಾಗಿ, ಕನ್ನಡನಾಡಿಗಾಗಿ, ಕನ್ನಡಿಗರಿಗಾಗಿ ಸದಾಕಾಲ ದುಡಿಯುವ ಸಲುವಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ.”ಈ-ಕವಿ” ಸಂಸ್ಥೆಯು ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ದತ್ತುತೆಗೆದುಕೊಳ್ಳುವ, ಬಡ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಕೊಡುವ, ಬಡಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವ, ಕೊಳಗೇರಿ ಪ್ರದೇಶದಲ್ಲಿ ವಾಸಿಸುವ ಮಕ್ಕಳನ್ನು ಭೇಟಿಮಾಡಿ ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಗುರಿಯನ್ನು ಮುಟ್ಟುವ ಸಲುವಾಗಿ “ಈ-ಕವಿ” ಪ್ರತಿ ಜಿಲ್ಲೆಗಳಲ್ಲಿ, ಪ್ರತಿ ತಾಲ್ಲೂಕುಗಳಲ್ಲಿ ಶಾಖೆಗಳನ್ನು ಪ್ರಾರಂಭಿಸಲಾಗಿದೆ. ಇದರಿಂದಬೆಂಗಳೂರಿನಲ್ಲಿ ವಾಸಿಸುತ್ತಿರುವ ಕನ್ನಡಿಗರಿಗೆ ತಮ್ಮ ತಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ , ಹಳ್ಳಿಗಳ ಬಗ್ಗೆ ಚಿಂತಿಸಿ, ತನ್ನನ್ನು ಬೆಳೆಸಿದ ಊರಿಗೆ ಸಹಾಯ ಮಾಡುವ ಒಂದು ಸುವರ್ಣಾವಕಾಶ “ಈ-ಕವಿ” ಯಲ್ಲಿ ಕಲ್ಪಿತವಾಗಿದೆ. ಬನ್ನಿ ಸೋದರರೇ , ನಾವೆಲ್ಲ ಒಂದಾಗಿ ದುಡಿಯೋಣ.
EKAVI
EKAVI activities on picasaweb album
http://picasaweb.google.com/vmkumaraswamy
Activities, Photo Albums, Articles,
http://ellakavi.wordpress.com/2008/02/17/activities-photo-albums-articles/
About EKAVI-VMK-School Adoption-EKAVI KUTUMBHA-EKAVI Programs
______________________________________________
If you can’t read below - CLICK here-
ಮಾರಪ್ಪನಪಾಳ್ಯ ವೆಂಕಟಪ್ಪ
ಕುಮಾರಸ್ವಾಮಿ ಅಟ್NovaMed@aol.com
ಕಾವೇರಿಯಿಂದ ಗೋದಾವರಿವರೆಗೆ ಮತ್ತು ಅಮೆರಿಕಾದವರೆಗೆ !
*ಶಾಮ್ ಮತ್ತು ರಘು
‘ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು..’
- ಎಂ.ಗೋಪಾಲಕೃಷ್ಣ ಅಡಿಗ.
ಜಾಣರ ಸಾಲಿಗೆ, ಧನದಾಹಿಗಳ ಪಾಲಿಗೆ ಅವಕಾಶಗಳ ಅಮರಾವತಿಯಾದ ಅಮೆರಿಕೆಯೆಂಬ ‘ಮೋಹನ ಮುರಳಿ‘ ಚುಂಬಕತೆಯ ಸೆಳವಿಗೆ ಒಳಗಾಗಲು ಬಲವಾದ ಕಾರಣಗಳ ಅಗತ್ಯವೇ ಇಲ್ಲ . ನಮ್ಮ ಪ್ರತಿಭೆಗೆ ಇಲ್ಲಿ ಅವಕಾಶ ಸಿಗುತ್ತಿಲ್ಲ ಎನ್ನುವ ಕೊರಗಾದರೂ ಸರಿ, ಇಂಥ ದೇಶದಲ್ಲಿ ಹುಟ್ಟಿದೆನೆಲ್ಲ ಎನ್ನುವ ಕೀಳರಿಮೆಯಾದರೂ ಆದೀತು; ಯಾವುದೇ ನೆಪದಿಂದ ಅರಸಿ ಬರುವ ಪ್ರತಿಭೆಯ ಅರಗಿಸಿಕೊಳ್ಳಲು ಅಗತ್ಯವಾದ ಸಂಕುಚನ ವಿಕಸನ ಅಮೆರಿಕೆಗೆ ಸಾಧ್ಯ. ಅದು ಅದರ ಅನನ್ಯತೆ.
ಕನ್ನಡಿಗರನ್ನೇ ತೆಗೆದುಕೊಳ್ಳಿ: ಸಿಲಿಕಾನ್ ಸಾಮ್ರಾಜ್ಯದ ಅಸ್ತಿಭಾರವಾಗಿ ದುಡಿಯುತ್ತಿದ್ದಾರೆ. ವರ್ಜೀನಿಯಾ, ಮಿನೆಸೊಟ, ಇಲಿನಾಯ್, ಕ್ಯಾಲಿಫೋರ್ನಿಯಾ, ಮುಂತಾದ ಪ್ರದೇಶಗಳಲ್ಲೆಲ್ಲ ಕನ್ನಡಿಗರು ಬಹುಸಂಖ್ಯಾತರು. ಅಂದಹಾಗೆ, ತವರಿಗಿಂತ ತೀರಾ ಭಿನ್ನವಾದ ನೆಲದಲ್ಲಿ ವಾಸಿಸುವ ಇವರುಗಳ ಬದುಕು ಎಂಥದು? ಆಫೀಸ್ ಕೆಲಸದ ಹೊರತಾಗಿ ಇವರೆಲ್ಲ ಏನು ಮಾಡುತ್ತಾರೆ? ಮುಖ್ಯವಾಗಿ, ನೆಮ್ಮದಿಯಾಗಿರುತ್ತಾರಾ? ತವರ ಕರಕರೆಗೆ, ನೆನಪುಗಳಿಗೆ ಹನಿಗಣ್ಣಾಗುತ್ತಾರಾ? ಪರಕೀಯತೆ ಅನುಭವಿಸುತ್ತಾರಾ?
ಸಾಮಾನ್ಯವಾಗಿ ಮೂರು ವರ್ಗದ ಜನರಿರುತ್ತಾರೆ : ಮೊದಲನೆಯ ವರ್ಗದವರು, ತಾವಿರುವ ಪರಿಸರವನ್ನೆ ತಮ್ಮದೆಂದುಕೊಳ್ಳುತ್ತಾ ಬದುಕನ್ನು ಸಂತೋಷವಾಗಿ ರೂಪಿಸಿಕೊಳ್ಳುವವರು. ಅವರಿಗೆ ಭಾವನೆಗಳಿಗಿಂತ ವೈಯಕ್ತಿಕ ಬದುಕು ದೊಡ್ಡದು. ಎರಡನೆಯ ವರ್ಗದ ಜನರು ಇರುವ ಪರಿಸರಕ್ಕೆ ಹೊಂದಿಕೊಳ್ಳಲಾಗದೆ, ಹೊಂದುವ ಪರಿಸರಕ್ಕೆ ಮರಳಲಾಗದೆ ನರಳುವವರು. ಈ ತ್ರಿಶಂಕು ಪರಿಸರದಲ್ಲಿಯೇ ಹೊರಳಿ ನರಳಿ ಬದುಕುವವರು. ಮೂರನೇ ವರ್ಗದ ಮಂದಿ- ಈ ಕಿರಿಕಿರಿಯೆಲ್ಲ ಯಾಕೆ ಎಂದು ತವರಿಗೆ ನಿಸೂರಾಗಿ ವಾಪಸ್ಸಾಗುವವರು.
ಮೇಲಿನ ಮೂರು ವರ್ಗಕ್ಕಿಂಥ ಭಿನ್ನವಾದ ಮತ್ತೊಂದು ವರ್ಗದ ಜನರೂ ಇದ್ದಾರೆ. ಮೇಲಿನ ಎಲ್ಲ ಸಂಕಟ ತಲ್ಲಣಗಳು ಅವರವೂ ಆಗಿರುತ್ತವೆ. ಆದರೆ, ಅವರು ಮನೆಯೇ ಮಂತ್ರಾಲಯ ಅನ್ನುವವರು ಹಾಗೂ ಮನೆಯನ್ನೇ ಮಂತ್ರಾಲಯವಾಗಿ ಬದಲಿಸಿಕೊಳ್ಳುವ ಸಾಮರ್ಥ್ಯ ಉಳ್ಳವರು. ಸಾಧ್ಯವಾದಷ್ಟು ಮಟ್ಟಿಗೆ ತವರಿನ ಪರಿಸರವನ್ನು ತಮ್ಮ ಸುತ್ತ ಸೃಷ್ಟಿಸಿಕೊಳ್ಳುವ ಪ್ರಯತ್ನ ಅವರದು. ಅನೇಕ ಭಾರಿ ಅಂಥ ಪ್ರಯತ್ನಗಳ ಫಲಿತಾಂಶ ಮೂಲಕ್ಕಿಂಥ ಹೆಚ್ಚು ಸುಂದರವಾಗಿ, ಅರ್ಥಪೂರ್ಣವಾಗಿ ಇರುವುದೂ ಸಾಧ್ಯ! ಬೊಗಸೆಯಿದ್ದಷ್ಟು ಭಾಗ್ಯ!
ವೆಂಕಟಪ್ಪ ಎಂ.ಕುಮಾರಸ್ವಾಮಿ ಅಂಥ ಭಾಗ್ಯವಂತರಲ್ಲೊಬ್ಬರು!
* * *
ನೋಡಿ ಸ್ವಾಮಿ ‘ಕನ್ನಡ ಸಂಭವ’ ಕುಮಾರಸ್ವಾಮಿ ಇರೋದೆ ಹೀಗೆ!
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಮಾರಪ್ಪನಪಾಳ್ಯ ಮೂಲದ ವಿ.ಎಂ.ಕುಮಾರಸ್ವಾಮಿ (emaiL: NovaMed@aol.com) ಅವರದು ಅಮೆರಿಕನ್ನಡಿಗರ ಪಟ್ಟಿಯಲ್ಲಿ ಎದ್ದು ಕಾಣುವ ಹೆಸರುಗಳಲ್ಲೊಂದು. ‘ಕನ್ನಡ ಎಲ್ಲಿ ತುಳಿತಕ್ಕೊಳಗಾಗುತ್ತದೆ, ಅಲ್ಲಿ ಕುಮಾರಸ್ವಾಮಿ ಅವರ ಪ್ರತಿಭಟನೆಯ ಧ್ವನಿ ಇರುತ್ತದೆ!’ ಎನ್ನುವುದು ಅವರ ವೈಶಿಷ್ಟ್ಯಕ್ಕೆ ಹೊಂದುವ ಒನ್ಲೈನರ್.
ಬರಿಯ ಕನ್ನಡಪ್ರೇಮಿ ಎಂದಷ್ಟೇ ಹೇಳಿದರೆ ಕುಮಾರಸ್ವಾಮಿ ಅವರ ಕುರಿತು ಏನನ್ನೂ ಹೇಳಿದಂತಾಗುವುದಿಲ್ಲ . ಕನ್ನಡಪ್ರೇಮ, ಕನ್ನಡ ಚಳವಳಿಯನ್ನು ಅನ್ನವಾಗಿಸಿಕೊಂಡವರು/ಜೀವನವಾಗಿಸಿಕೊ ಂಡವರು ನಮ್ಮಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ, ಕುಮಾರಸ್ವಾಮಿ ಅವರ ಅಗ್ಗಳಿಕೆ ನಿಂತಿರುವುದು ಕನ್ನಡಾಭಿಮಾನದ ಮೇಲೆ ಮಾತ್ರವಲ್ಲ : ಉದ್ಯಮ, ಸಮಾಜಸೇವೆ, ಸಂಘಟನೆ, ಸಂಸ್ಕೃತಿ-ಸಾಹಿತ್ಯ ಪರಿಚಾರಿಕೆ.. ಕುಮಾರಸ್ವಾಮಿ ಯಾವುದರಲ್ಲೂ ಹಿಂದೆ ಬಿದ್ದವರಲ್ಲ .
ಹ್ಯೂಸ್ಟನ್ ಕನ್ನಡ ಸಮ್ಮೇಳನದಿಂದ ಹಿರಿಸಾವೆ ಶಾಲೆಯ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವವರೆಗೆ ಅವರ ಸಾಧನೆಯ ವ್ಯಕ್ತಿತ್ವದ ಬಿಳಲುಗಳುಂಟು. ಅದೇರೀತಿ, ಅಮೆರಿಕಾ ಹಾಗೂ ಬೆಂಗಳೂರು ಎರಡೂ ಕಡೆ ಅವರ ವ್ಯಕ್ತಿತ್ವದ ಭಾಗವಾದ ಯಶಸ್ವಿ ಉದ್ದಿಮೆದಾರನ ಛಾಪುಂಟು. ಅವರು ಹೆಸರಿನಲ್ಲಿ ಕುಮಾರ, ಸಾಧನೆಯಲ್ಲಿ ತ್ರಿವಿಕ್ರಮ!
1979 ರಲ್ಲಿ ಕುಮಾರ್ ಅಂಡ್ ಅಸೋಸಿಯೇಟ್ಸ್ ಕಂಪನಿ ಸ್ಥಾಪಿಸಿದ ಕುಮಾರಸ್ವಾಮಿ, ನೋವಾ ಕಂಪನೀಸ್ನ ಅಧ್ಯಕ್ಷರು (1989 ರಿಂದ) ಕೂಡ. ಬೆಂಗಳೂರಿನ ಸ್ಕೈ ಇಂಜಿನಿಯರಿಂಗ್ ಕನ್ಸ್ಟ್ರಕ್ಷನ್ ಕಂಪನಿಯ ಕಾರ್ಯಕಾರಿ ನಿರ್ದೇಶಕರಾಗಿ (1971 ರಿಂದ 74) ದುಡಿದ ಅನುಭವವೂ ಅವರಿಗಿದೆ. ಟಸ್ಟಿನ್ನಲ್ಲಿನ 203 ಹಾಸಿಗೆ ಸಾಮರ್ಥ್ಯದ ಟಸ್ಟಿನ್ ಹಾಸ್ಪಿಟಲ್ ಮೆಡಿಕಲ್ ಸೆಂಟರ್ನ (Tustin Hospital Medical Center) ಮಾಲಕರಾಗಿದ್ದ (1989 ರಿಂದ 1992 ರವರೆಗೆ) ಯಶಸ್ವಿ ಉದ್ಯಮಿ ಅವರು.
ಕನ್ನಡವೆನೆ ಕುಣಿದಾಡುವ ಕುಮಾರಸ್ವಾಮಿ
ಅವರು ಕನ್ನಡ ಲೇಖಕರಲ್ಲ ; ಲೇಖಕರ ಕುರಿತು ಗೌರವ ಉಳ್ಳ ಸಹೃದಯಿ. ಭಾರತ, ಕರ್ನಾಟಕ, ವಿಶೇಷವಾಗಿ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಸದಾ ತುಡಿಯುವ ಮನಸ್ಸು. ಚಂದ್ರಶೇಖರ ಕಂಬಾರ, ಎಸ್.ಎಲ್.ಭೈರಪ್ಪ ಸೇರಿದಂತೆ ಅನೇಕ ಕನ್ನಡ ಲೇಖಕ, ಕಲಾವಿದರು ತಮ್ಮ ಅಮೆರಿಕ ಪ್ರವಾಸದಲ್ಲಿ ಕುಮಾರಸ್ವಾಮಿ ಅವರ ಆತಿಥ್ಯ ಉಂಡಿದ್ದಾರೆ.
ಕುಮಾರಸ್ವಾಮಿ ಅವರ ಕೆಲ ಸಾಧನೆಗಳನ್ನು ಹೆಕ್ಕುವುದಾದರೆ:
- ತಾಯಮ್ಮ ಕುಟುಂಬದ ಸದಸ್ಯರಿಂದ ನಿಧಿ ಸಂಗ್ರಹಿಸಿ, ಆದಿ ಚುಂಚನಗಿರಿ ಮಹಾಸಂಸ್ಥಾನದ ಸ್ವಾಮೀಜಿ ಉಪಯೋಗಕ್ಕಾಗಿ ಮೊದಲ ಬಾರಿಗೆ ಮರ್ಸಿಡಿಸ್ ಬೆಂಜ್ ಕಾರು ಕೊಡುಗೆ.
- ತಂದೆಯ ಹೆಸರಿನಲ್ಲಿ 2000 ಇಸವಿಯಲ್ಲಿ ಸ್ಕಾಲರ್ಷಿಪ್ ಸ್ಥಾಪನೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಹಿರಿಸಾವೆಯ ಗರ್ಲ್ಸ್ ಎಲಿಮೆಂಟರಿ ಶಾಲೆ ಮತ್ತು ಮಾಧ್ಯಮಿಕ ಶಾಲೆಯ ತಲಾ ಇಬ್ಬರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ. ಆರ್ಥಿಕವಾಗಿ ಹಿಂದುಳಿದ ಆರು ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ.
- ತಂದೆ ವೆಂಕಟಪ್ಪನವರ ಹೆಸರಿನಲ್ಲಿ 1982 ರಿಂದ ಸ್ಕಾಲರ್ಷಿಪ್ (ಕೆನಡಾ ಹಾಗೂ ಅಮೆರಿಕಾದಲ್ಲಿ ನೆಲೆಸಿರುವ ಕುಟುಂಬದ ಸದಸ್ಯರಿಂದ ನಿಧಿ ಸಂಗ್ರಹಣೆ)- ನೆಲಮಂಗಲದ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಹಾಗೂ ನಾಗಮಂಗಲದ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ.
- ಹಂಪಿ ವಿಶ್ವ ವಿದ್ಯಾಲಯ ಪ್ರಕಟಿಸಿರುವ ಕುವೆಂಪು ಸಮಗ್ರ ಕಾವ್ಯ(ತಲಾ 1250 ಪುಟಗಳ ಎರಡು ಸಂಪುಟ. 3 ಸಾವಿರ ಪ್ರತಿ) ಕೃತಿ ಪ್ರಕಟಣೆಗೆ ಅಕ್ಕ ಪ್ರತಿನಿಧಿಯಾಗಿ ನಿಧಿ ಸಂಗ್ರಹಣೆ.
- ಬ್ರಿಟನ್ನಲ್ಲಿನ ಭಾರತೀಯ ವಿದ್ಯಾಭವನ ಕನ್ನಡ ತರಗತಿಗಳನ್ನು ಪ್ರಾರಂಭಿಸಲು ಒಪ್ಪಿಕೊಳ್ಳುವಂತೆ ಒತ್ತಡ ರೂಪಿಸಿದ್ದು , ಆಕಾಶವಾಣಿಯ ಅಧಿಕೃತ ವೆಬ್ಸೈಟ್ನಲ್ಲಿ ಕನ್ನಡ ಹಾಡುಗಳು ಇಲ್ಲದಿರುವುದನ್ನು ಹುಡುಕಿ ಪ್ರತಿಭಟನೆ ರೂಪಿಸಿದ್ದು , ಇವೆಲ್ಲಾ ಕುಮಾರಸ್ವಾಮಿ ಸಾಧನೆಗಳು.
ವಕ್ಕಲಿಗರ ಪ್ರತಿನಿಧಿಯಾಗಿ..
‘ಅಮೆರಿಕಾ ವಕ್ಕಲಿಗರ ಪರಿಷತ್ತು’ ಅಧ್ಯಕ್ಷರಾಗಿ ಕುಮಾರಸ್ವಾಮಿ ಅವರ ಸಾಧನೆ ದೊಡ್ಡದು. 1998 ರಲ್ಲಿ ಅಮೆರಿಕಾದಲ್ಲಿ ನಡೆದ ವಕ್ಕಲಿಗರ ಪರಿಷತ್ತಿನ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ ರೂವಾರಿ ಅವರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
1998 ರಿಂದ ಅಕ್ಕ ಕೂಟದ ಟ್ರಸ್ಟಿ , ನಿರ್ದೇಶಕರಾಗಿ- ಅಕ್ಕ ಕೂಟದ ಫೌಂಡರ್ ಟ್ರಸ್ಟಿಯಾಗಿ ದುಡಿದಿದ್ದಾರೆ. ಪಶ್ಚಿಮ ಅಮೆರಿಕಾದ ವಕ್ಕಲಿಗರ ಪರಿಷತ್ತಿನ ಸ್ಥಾಪಕರಲ್ಲೊಬ್ಬರು. ದಕ್ಷಿಣ ಕ್ಯಾಲಿಫೋರ್ನಿಯಾದ ಕನ್ನಡ ಸಾಂಸ್ಕೃತಿಕ ಸಂಘಟನೆ, ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ಅಲ್ಯೂಮಿನಿ ಅಸೋಸಿಯೇಶನ್ ಆಫ್ ಅಮೇರಿಕಾದ ಕಾರ್ಯದರ್ಶಿಯಾಗಿ ಕುಮಾರಸ್ವಾಮಿ ಕಾರ್ಯನಿರತರು.
ಕುಮಾರಸಂಭವ, ಬೆಳವಣಿಗೆಯ ಇತಿ ವೃತ್ತಾಂತ
ಕುಮಾರಸ್ವಾಮಿ ಅವರ ತಂದೆ ಡಾ.ಪಿ.ವೆಂಕಟಪ್ಪ ವೈದ್ಯಾಧಿಕಾರಿ. ತಾಯಿ ವಿ.ಲಕ್ಷ್ಮಮ್ಮ ಗೃಹಿಣಿ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಮಾರಪ್ಪನಪಾಳ್ಯದ ವಿ.ಎಂ.ಕುಮಾರಸ್ವಾಮಿ ಹುಟ್ಟಿದ್ದು- ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಗ್ರಾಮದಲ್ಲಿ , ಮೇ 3 1949 ರಂದು.
ಕುಮಾರಸ್ವಾಮಿ ಅವರಿಗೆ ಇಬ್ಬರು ಸಹೋದರರು ಹಾಗೂ ಇಬ್ಬರು ಸೋದರಿಯರು. ಐದೂ ಮಂದಿ ಅಮೆರಿಕಾದಲ್ಲೇ ಇದ್ದಾರೆ. ಗಿರಿಜಾ ರಾಂ ಲಾಸ್ ವೆಗಾಸ್ನಲ್ಲಿದ್ದಾರೆ. ಡಾ.ಎಂ.ವಿ.ಗೋಪಿನಾಥ್, ಕುಮಾರಸ್ವಾಮಿ, ಅಕ್ಕ ಮಹಾದೇವಿ, ಡಾ.ವಿ.ಎಂ. ಪದ್ಮನಾಭ ಕ್ಯಾಲಿಫೋರ್ನಿಯಾ ನಿವಾಸಿಗಳು.
ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ 1971 ಸಿವಿಲ್ ಇಂಜಿನಿಯರಿಂಗ್ ಪದವಿ ಪೂರೈಸಿದ ಕುಮಾರಸ್ವಾಮಿ- ಬಿಎಂಎಸ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ (1971-74) ಪೂರೈಸಿದರು. ಅಮೆರಿಕಾದUniversity of Wiscosin Whitewater,ನಿಂದ ಎಂಬಿಎ ಪದವಿ ಪಡೆದ ಜಾಣ ವಿದ್ಯಾರ್ಥಿ ಅವರು.
ಕುಮಾರಸ್ವಾಮಿ ಅವರ ಪತ್ನಿ ಸುಧಾರಾಣಿ ರಾಮಕೃಷ್ಣ ಬೆಂಗಳೂರಿನ ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದವರು. ಕುಮಾರಸ್ವಾಮಿ ಹಾಗೂ ಸುಧಾರಾಣಿ ಅವರ ಮದುವೆ ನಡೆದದ್ದು 1974, ಏಪ್ರಿಲ್ 11 ರಂದು. ದಂಪತಿಗಳಿಗೆ ಮೂವರು ಮಕ್ಕಳು : ಆರತಿಗೆ ಮಲ್ಲಿಕಾ ಕುಮಾರಸ್ವಾಮಿ ಹಾಗೂ ರಜನಿ ಕುಮಾರಸ್ವಾಮಿ, ಕೀರುತಿಗೆ ಶ್ರೀನಿವಾಸ್ ಕುಮಾರಸ್ವಾಮಿ.
ಅಂದಹಾಗೆ, ಕನಸುಗಳೊಂದಿಗೆ ಕುಮಾರಸ್ವಾಮಿ ಅಮೆರಿಕೆಗೆ ಪಾದ ಬೆಳೆಸಿದ್ದು- 1975 ರ ಜನವರಿ 5 ರಂದು.
ಈಗ ಕುಮಾರಸ್ವಾಮಿ ಏನು ಮಾಡುತ್ತಿದ್ದಾರೆ-
- ಅಮೆರಿಕಾದ ವಿಶ್ವ ವಿದ್ಯಾಲಯವೊಂದರಲ್ಲಿ ಕನ್ನಡ ಪೀಠ ಸ್ಥಾಪಿಸುವುದು ಅವರ ಕನಸು. ಅದಕ್ಕಾಗಿ’ಅಕ್ಕ’ ಸಹಯೋಗದಲ್ಲಿ ನಿಧಿಯಾಂದನ್ನು ಸ್ಥಾಪಿಸಲಾಗಿದೆ. ಅಮೆರಿಕಾದಲ್ಲಿನ ಎಲ್ಲ ವಿಶ್ವ ವಿದ್ಯಾಲಯಗಳನ್ನು ಕುಮಾರಸ್ವಾಮಿ ಸಂಪರ್ಕಿಸಿದ್ದಾರೆ. ಕನ್ನಡ ಪೀಠ ಸ್ಥಾಪನೆಗೆ ಪೆನ್ಸಿಲ್ವೇನಿಯಾ ವಿಶ್ವ ವಿದ್ಯಾಲಯ ಆಸಕ್ತಿ ತೋರಿಸಿದೆ.
- ಪೆನ್ಸಿಲ್ವೇನಿಯಾ ವಿವಿ ನೆರವಿನಲ್ಲಿ WE TALKನ್ನುವ ವೆಬ್ ಆಧರಿತ ಕನ್ನಡ ಕಲಿಕೆ ಕಾರ್ಯಕ್ರಮವನ್ನು ರೂಪಿಸುತ್ತಿದ್ದಾರೆ.
- ವಿಶ್ವಾದ್ಯಂತ ಇರುವ ಕನ್ನಡ ಸಂಘಟನೆಗಳನ್ನು ಸಂಪರ್ಕಿಸಿ, ಕರ್ನಾಟಕದ ವಾಣಿಜ್ಯ ಹಾಗೂ ಪ್ರವಾಸೋದ್ಯಮವನ್ನು ಪ್ರೋತ್ರಾಹಿಸುವ ಕಾರ್ಯಕ್ರಮಗಳ ಸಮಾನ ಮಾಧ್ಯಮವನ್ನು ರೂಪಿಸುವ ಭಗೀರಥ ಪ್ರಯತ್ನ.
- ಲಾಸ್ ಏಂಜಲೀಸ್ನ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾಲಯದ ಸಾರ್ವಜನಿಕ ಆರೋಗ್ಯ ಇಲಾಖೆ ಹಾಗೂ ಕರ್ನಾಟಕ ಆರೋಗ್ಯ ಕಾರ್ಯಪಡೆ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಿಸುವ ಮೂಲಕ, ಕರ್ನಾಟಕದಲ್ಲಿ ಪ್ರಾಥಮಿಕ ಆರೋಗ್ಯ ಸಂರಕ್ಷಣೆ ಹಾಗೂ ಸಾರ್ವಜನಿಕ ಆರೋಗ್ಯ ಸಂಸ್ಥೆಗಳನ್ನು ಸ್ಥಾಪಿಸುವ ಯೋಜನೆಗೆ ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ. ಯೋಜನೆ ಪ್ರಗತಿಯಲ್ಲಿದೆ.
____________________________________________________________
Shivamoga, Saagara, Bhadravathi, Soraba, Thirthalli, Hosanagara,Shikaripura.
Shivamoga, Saagara, Bhadravathi, Soraba, Thirthalli, Hosanagara and Shikaripura.
Shivamoga, Saagara, Bhadravathi, Soraba, Thirthalli, Hosanagara and Shikaripura.
EKAVI SHIVAMOGA and it’s Taluqs Udghaatane
EKAVI
EKAVI activities on picasaweb album
http://picasaweb.google.com/vmkumaraswamy
Activities, Photo Albums, Articles,
http://ellakavi.wordpress.com/2008/02/17/activities-photo-albums-articles/
About EKAVI-VMK-School Adoption-EKAVI KUTUMBHA-EKAVI Programs
ni rachitha kannada
ಸನ್ಮಿತ್ರರೇ,
ಬಹು ದಿನಗಳ ನಂತರ ಬ್ಲಾಗ್ ಹೊಟ್ಟೆ ಒಂದಿಷ್ಟು ಆಹಾರ ಒದಗಿಸುವ ಪ್ರಯತ್ನ ಮಾಡಿದ್ದೇನೆ..ಒಮ್ಮೆ ಕಣ್ಣಾಡಿಸಿ…
ಬರವಣಿಗೆ ಅನಿವಾರ್ಯ ಕರ್ಮ
http://nirachitha.blogspot.com/
-ನಿ ರಚಿತ
Activities, Photo Albums, Articles,
EKAVI activities on picasaweb album
http://picasaweb.google.com/vmkumaraswamy
_____________________________
If you can’t read below - CLICK here-
ಮಾರಪ್ಪನಪಾಳ್ಯ ವೆಂಕಟಪ್ಪ
ಕುಮಾರಸ್ವಾಮಿ ಅಟ್NovaMed@aol.com
ಕಾವೇರಿಯಿಂದ ಗೋದಾವರಿವರೆಗೆ ಮತ್ತು ಅಮೆರಿಕಾದವರೆಗೆ !
*ಶಾಮ್ ಮತ್ತು ರಘು
‘ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು..’
- ಎಂ.ಗೋಪಾಲಕೃಷ್ಣ ಅಡಿಗ.
ಜಾಣರ ಸಾಲಿಗೆ, ಧನದಾಹಿಗಳ ಪಾಲಿಗೆ ಅವಕಾಶಗಳ ಅಮರಾವತಿಯಾದ ಅಮೆರಿಕೆಯೆಂಬ ‘ಮೋಹನ ಮುರಳಿ‘ ಚುಂಬಕತೆಯ ಸೆಳವಿಗೆ ಒಳಗಾಗಲು ಬಲವಾದ ಕಾರಣಗಳ ಅಗತ್ಯವೇ ಇಲ್ಲ . ನಮ್ಮ ಪ್ರತಿಭೆಗೆ ಇಲ್ಲಿ ಅವಕಾಶ ಸಿಗುತ್ತಿಲ್ಲ ಎನ್ನುವ ಕೊರಗಾದರೂ ಸರಿ, ಇಂಥ ದೇಶದಲ್ಲಿ ಹುಟ್ಟಿದೆನೆಲ್ಲ ಎನ್ನುವ ಕೀಳರಿಮೆಯಾದರೂ ಆದೀತು; ಯಾವುದೇ ನೆಪದಿಂದ ಅರಸಿ ಬರುವ ಪ್ರತಿಭೆಯ ಅರಗಿಸಿಕೊಳ್ಳಲು ಅಗತ್ಯವಾದ ಸಂಕುಚನ ವಿಕಸನ ಅಮೆರಿಕೆಗೆ ಸಾಧ್ಯ. ಅದು ಅದರ ಅನನ್ಯತೆ.
ಕನ್ನಡಿಗರನ್ನೇ ತೆಗೆದುಕೊಳ್ಳಿ: ಸಿಲಿಕಾನ್ ಸಾಮ್ರಾಜ್ಯದ ಅಸ್ತಿಭಾರವಾಗಿ ದುಡಿಯುತ್ತಿದ್ದಾರೆ. ವರ್ಜೀನಿಯಾ, ಮಿನೆಸೊಟ, ಇಲಿನಾಯ್, ಕ್ಯಾಲಿಫೋರ್ನಿಯಾ, ಮುಂತಾದ ಪ್ರದೇಶಗಳಲ್ಲೆಲ್ಲ ಕನ್ನಡಿಗರು ಬಹುಸಂಖ್ಯಾತರು. ಅಂದಹಾಗೆ, ತವರಿಗಿಂತ ತೀರಾ ಭಿನ್ನವಾದ ನೆಲದಲ್ಲಿ ವಾಸಿಸುವ ಇವರುಗಳ ಬದುಕು ಎಂಥದು? ಆಫೀಸ್ ಕೆಲಸದ ಹೊರತಾಗಿ ಇವರೆಲ್ಲ ಏನು ಮಾಡುತ್ತಾರೆ? ಮುಖ್ಯವಾಗಿ, ನೆಮ್ಮದಿಯಾಗಿರುತ್ತಾರಾ? ತವರ ಕರಕರೆಗೆ, ನೆನಪುಗಳಿಗೆ ಹನಿಗಣ್ಣಾಗುತ್ತಾರಾ? ಪರಕೀಯತೆ ಅನುಭವಿಸುತ್ತಾರಾ?
ಸಾಮಾನ್ಯವಾಗಿ ಮೂರು ವರ್ಗದ ಜನರಿರುತ್ತಾರೆ : ಮೊದಲನೆಯ ವರ್ಗದವರು, ತಾವಿರುವ ಪರಿಸರವನ್ನೆ ತಮ್ಮದೆಂದುಕೊಳ್ಳುತ್ತಾ ಬದುಕನ್ನು ಸಂತೋಷವಾಗಿ ರೂಪಿಸಿಕೊಳ್ಳುವವರು. ಅವರಿಗೆ ಭಾವನೆಗಳಿಗಿಂತ ವೈಯಕ್ತಿಕ ಬದುಕು ದೊಡ್ಡದು. ಎರಡನೆಯ ವರ್ಗದ ಜನರು ಇರುವ ಪರಿಸರಕ್ಕೆ ಹೊಂದಿಕೊಳ್ಳಲಾಗದೆ, ಹೊಂದುವ ಪರಿಸರಕ್ಕೆ ಮರಳಲಾಗದೆ ನರಳುವವರು. ಈ ತ್ರಿಶಂಕು ಪರಿಸರದಲ್ಲಿಯೇ ಹೊರಳಿ ನರಳಿ ಬದುಕುವವರು. ಮೂರನೇ ವರ್ಗದ ಮಂದಿ- ಈ ಕಿರಿಕಿರಿಯೆಲ್ಲ ಯಾಕೆ ಎಂದು ತವರಿಗೆ ನಿಸೂರಾಗಿ ವಾಪಸ್ಸಾಗುವವರು.
ಮೇಲಿನ ಮೂರು ವರ್ಗಕ್ಕಿಂಥ ಭಿನ್ನವಾದ ಮತ್ತೊಂದು ವರ್ಗದ ಜನರೂ ಇದ್ದಾರೆ. ಮೇಲಿನ ಎಲ್ಲ ಸಂಕಟ ತಲ್ಲಣಗಳು ಅವರವೂ ಆಗಿರುತ್ತವೆ. ಆದರೆ, ಅವರು ಮನೆಯೇ ಮಂತ್ರಾಲಯ ಅನ್ನುವವರು ಹಾಗೂ ಮನೆಯನ್ನೇ ಮಂತ್ರಾಲಯವಾಗಿ ಬದಲಿಸಿಕೊಳ್ಳುವ ಸಾಮರ್ಥ್ಯ ಉಳ್ಳವರು. ಸಾಧ್ಯವಾದಷ್ಟು ಮಟ್ಟಿಗೆ ತವರಿನ ಪರಿಸರವನ್ನು ತಮ್ಮ ಸುತ್ತ ಸೃಷ್ಟಿಸಿಕೊಳ್ಳುವ ಪ್ರಯತ್ನ ಅವರದು. ಅನೇಕ ಭಾರಿ ಅಂಥ ಪ್ರಯತ್ನಗಳ ಫಲಿತಾಂಶ ಮೂಲಕ್ಕಿಂಥ ಹೆಚ್ಚು ಸುಂದರವಾಗಿ, ಅರ್ಥಪೂರ್ಣವಾಗಿ ಇರುವುದೂ ಸಾಧ್ಯ! ಬೊಗಸೆಯಿದ್ದಷ್ಟು ಭಾಗ್ಯ!
ವೆಂಕಟಪ್ಪ ಎಂ.ಕುಮಾರಸ್ವಾಮಿ ಅಂಥ ಭಾಗ್ಯವಂತರಲ್ಲೊಬ್ಬರು!
* * *
ನೋಡಿ ಸ್ವಾಮಿ ‘ಕನ್ನಡ ಸಂಭವ’ ಕುಮಾರಸ್ವಾಮಿ ಇರೋದೆ ಹೀಗೆ!
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಮಾರಪ್ಪನಪಾಳ್ಯ ಮೂಲದ ವಿ.ಎಂ.ಕುಮಾರಸ್ವಾಮಿ (emaiL: NovaMed@aol.com) ಅವರದು ಅಮೆರಿಕನ್ನಡಿಗರ ಪಟ್ಟಿಯಲ್ಲಿ ಎದ್ದು ಕಾಣುವ ಹೆಸರುಗಳಲ್ಲೊಂದು. ‘ಕನ್ನಡ ಎಲ್ಲಿ ತುಳಿತಕ್ಕೊಳಗಾಗುತ್ತದೆ, ಅಲ್ಲಿ ಕುಮಾರಸ್ವಾಮಿ ಅವರ ಪ್ರತಿಭಟನೆಯ ಧ್ವನಿ ಇರುತ್ತದೆ!’ ಎನ್ನುವುದು ಅವರ ವೈಶಿಷ್ಟ್ಯಕ್ಕೆ ಹೊಂದುವ ಒನ್ಲೈನರ್.
ಬರಿಯ ಕನ್ನಡಪ್ರೇಮಿ ಎಂದಷ್ಟೇ ಹೇಳಿದರೆ ಕುಮಾರಸ್ವಾಮಿ ಅವರ ಕುರಿತು ಏನನ್ನೂ ಹೇಳಿದಂತಾಗುವುದಿಲ್ಲ . ಕನ್ನಡಪ್ರೇಮ, ಕನ್ನಡ ಚಳವಳಿಯನ್ನು ಅನ್ನವಾಗಿಸಿಕೊಂಡವರು/ಜೀವನವಾಗಿಸಿಕೊಂಡವರು ನಮ್ಮಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ, ಕುಮಾರಸ್ವಾಮಿ ಅವರ ಅಗ್ಗಳಿಕೆ ನಿಂತಿರುವುದು ಕನ್ನಡಾಭಿಮಾನದ ಮೇಲೆ ಮಾತ್ರವಲ್ಲ : ಉದ್ಯಮ, ಸಮಾಜಸೇವೆ, ಸಂಘಟನೆ, ಸಂಸ್ಕೃತಿ-ಸಾಹಿತ್ಯ ಪರಿಚಾರಿಕೆ.. ಕುಮಾರಸ್ವಾಮಿ ಯಾವುದರಲ್ಲೂ ಹಿಂದೆ ಬಿದ್ದವರಲ್ಲ .
ಹ್ಯೂಸ್ಟನ್ ಕನ್ನಡ ಸಮ್ಮೇಳನದಿಂದ ಹಿರಿಸಾವೆ ಶಾಲೆಯ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವವರೆಗೆ ಅವರ ಸಾಧನೆಯ ವ್ಯಕ್ತಿತ್ವದ ಬಿಳಲುಗಳುಂಟು. ಅದೇರೀತಿ, ಅಮೆರಿಕಾ ಹಾಗೂ ಬೆಂಗಳೂರು ಎರಡೂ ಕಡೆ ಅವರ ವ್ಯಕ್ತಿತ್ವದ ಭಾಗವಾದ ಯಶಸ್ವಿ ಉದ್ದಿಮೆದಾರನ ಛಾಪುಂಟು. ಅವರು ಹೆಸರಿನಲ್ಲಿ ಕುಮಾರ, ಸಾಧನೆಯಲ್ಲಿ ತ್ರಿವಿಕ್ರಮ!
1979 ರಲ್ಲಿ ಕುಮಾರ್ ಅಂಡ್ ಅಸೋಸಿಯೇಟ್ಸ್ ಕಂಪನಿ ಸ್ಥಾಪಿಸಿದ ಕುಮಾರಸ್ವಾಮಿ, ನೋವಾ ಕಂಪನೀಸ್ನ ಅಧ್ಯಕ್ಷರು (1989 ರಿಂದ) ಕೂಡ. ಬೆಂಗಳೂರಿನ ಸ್ಕೈ ಇಂಜಿನಿಯರಿಂಗ್ ಕನ್ಸ್ಟ್ರಕ್ಷನ್ ಕಂಪನಿಯ ಕಾರ್ಯಕಾರಿ ನಿರ್ದೇಶಕರಾಗಿ (1971 ರಿಂದ 74) ದುಡಿದ ಅನುಭವವೂ ಅವರಿಗಿದೆ. ಟಸ್ಟಿನ್ನಲ್ಲಿನ 203 ಹಾಸಿಗೆ ಸಾಮರ್ಥ್ಯದ ಟಸ್ಟಿನ್ ಹಾಸ್ಪಿಟಲ್ ಮೆಡಿಕಲ್ ಸೆಂಟರ್ನ (Tustin Hospital Medical Center) ಮಾಲಕರಾಗಿದ್ದ (1989 ರಿಂದ 1992 ರವರೆಗೆ) ಯಶಸ್ವಿ ಉದ್ಯಮಿ ಅವರು.
ಕನ್ನಡವೆನೆ ಕುಣಿದಾಡುವ ಕುಮಾರಸ್ವಾಮಿ
ಅವರು ಕನ್ನಡ ಲೇಖಕರಲ್ಲ ; ಲೇಖಕರ ಕುರಿತು ಗೌರವ ಉಳ್ಳ ಸಹೃದಯಿ. ಭಾರತ, ಕರ್ನಾಟಕ, ವಿಶೇಷವಾಗಿ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಸದಾ ತುಡಿಯುವ ಮನಸ್ಸು. ಚಂದ್ರಶೇಖರ ಕಂಬಾರ, ಎಸ್.ಎಲ್.ಭೈರಪ್ಪ ಸೇರಿದಂತೆ ಅನೇಕ ಕನ್ನಡ ಲೇಖಕ, ಕಲಾವಿದರು ತಮ್ಮ ಅಮೆರಿಕ ಪ್ರವಾಸದಲ್ಲಿ ಕುಮಾರಸ್ವಾಮಿ ಅವರ ಆತಿಥ್ಯ ಉಂಡಿದ್ದಾರೆ.
ಕುಮಾರಸ್ವಾಮಿ ಅವರ ಕೆಲ ಸಾಧನೆಗಳನ್ನು ಹೆಕ್ಕುವುದಾದರೆ:
- ತಾಯಮ್ಮ ಕುಟುಂಬದ ಸದಸ್ಯರಿಂದ ನಿಧಿ ಸಂಗ್ರಹಿಸಿ, ಆದಿ ಚುಂಚನಗಿರಿ ಮಹಾಸಂಸ್ಥಾನದ ಸ್ವಾಮೀಜಿ ಉಪಯೋಗಕ್ಕಾಗಿ ಮೊದಲ ಬಾರಿಗೆ ಮರ್ಸಿಡಿಸ್ ಬೆಂಜ್ ಕಾರು ಕೊಡುಗೆ.
- ತಂದೆಯ ಹೆಸರಿನಲ್ಲಿ 2000 ಇಸವಿಯಲ್ಲಿ ಸ್ಕಾಲರ್ಷಿಪ್ ಸ್ಥಾಪನೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಹಿರಿಸಾವೆಯ ಗರ್ಲ್ಸ್ ಎಲಿಮೆಂಟರಿ ಶಾಲೆ ಮತ್ತು ಮಾಧ್ಯಮಿಕ ಶಾಲೆಯ ತಲಾ ಇಬ್ಬರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ. ಆರ್ಥಿಕವಾಗಿ ಹಿಂದುಳಿದ ಆರು ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ.
- ತಂದೆ ವೆಂಕಟಪ್ಪನವರ ಹೆಸರಿನಲ್ಲಿ 1982 ರಿಂದ ಸ್ಕಾಲರ್ಷಿಪ್ (ಕೆನಡಾ ಹಾಗೂ ಅಮೆರಿಕಾದಲ್ಲಿ ನೆಲೆಸಿರುವ ಕುಟುಂಬದ ಸದಸ್ಯರಿಂದ ನಿಧಿ ಸಂಗ್ರಹಣೆ)- ನೆಲಮಂಗಲದ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಹಾಗೂ ನಾಗಮಂಗಲದ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ.
- ಹಂಪಿ ವಿಶ್ವ ವಿದ್ಯಾಲಯ ಪ್ರಕಟಿಸಿರುವ ಕುವೆಂಪು ಸಮಗ್ರ ಕಾವ್ಯ(ತಲಾ 1250 ಪುಟಗಳ ಎರಡು ಸಂಪುಟ. 3 ಸಾವಿರ ಪ್ರತಿ) ಕೃತಿ ಪ್ರಕಟಣೆಗೆ ಅಕ್ಕ ಪ್ರತಿನಿಧಿಯಾಗಿ ನಿಧಿ ಸಂಗ್ರಹಣೆ.
- ಬ್ರಿಟನ್ನಲ್ಲಿನ ಭಾರತೀಯ ವಿದ್ಯಾಭವನ ಕನ್ನಡ ತರಗತಿಗಳನ್ನು ಪ್ರಾರಂಭಿಸಲು ಒಪ್ಪಿಕೊಳ್ಳುವಂತೆ ಒತ್ತಡ ರೂಪಿಸಿದ್ದು , ಆಕಾಶವಾಣಿಯ ಅಧಿಕೃತ ವೆಬ್ಸೈಟ್ನಲ್ಲಿ ಕನ್ನಡ ಹಾಡುಗಳು ಇಲ್ಲದಿರುವುದನ್ನು ಹುಡುಕಿ ಪ್ರತಿಭಟನೆ ರೂಪಿಸಿದ್ದು , ಇವೆಲ್ಲಾ ಕುಮಾರಸ್ವಾಮಿ ಸಾಧನೆಗಳು.
ವಕ್ಕಲಿಗರ ಪ್ರತಿನಿಧಿಯಾಗಿ..
‘ಅಮೆರಿಕಾ ವಕ್ಕಲಿಗರ ಪರಿಷತ್ತು’ ಅಧ್ಯಕ್ಷರಾಗಿ ಕುಮಾರಸ್ವಾಮಿ ಅವರ ಸಾಧನೆ ದೊಡ್ಡದು. 1998 ರಲ್ಲಿ ಅಮೆರಿಕಾದಲ್ಲಿ ನಡೆದ ವಕ್ಕಲಿಗರ ಪರಿಷತ್ತಿನ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ ರೂವಾರಿ ಅವರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
1998 ರಿಂದ ಅಕ್ಕ ಕೂಟದ ಟ್ರಸ್ಟಿ , ನಿರ್ದೇಶಕರಾಗಿ- ಅಕ್ಕ ಕೂಟದ ಫೌಂಡರ್ ಟ್ರಸ್ಟಿಯಾಗಿ ದುಡಿದಿದ್ದಾರೆ. ಪಶ್ಚಿಮ ಅಮೆರಿಕಾದ ವಕ್ಕಲಿಗರ ಪರಿಷತ್ತಿನ ಸ್ಥಾಪಕರಲ್ಲೊಬ್ಬರು. ದಕ್ಷಿಣ ಕ್ಯಾಲಿಫೋರ್ನಿಯಾದ ಕನ್ನಡ ಸಾಂಸ್ಕೃತಿಕ ಸಂಘಟನೆ, ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ಅಲ್ಯೂಮಿನಿ ಅಸೋಸಿಯೇಶನ್ ಆಫ್ ಅಮೇರಿಕಾದ ಕಾರ್ಯದರ್ಶಿಯಾಗಿ ಕುಮಾರಸ್ವಾಮಿ ಕಾರ್ಯನಿರತರು.
ಕುಮಾರಸಂಭವ, ಬೆಳವಣಿಗೆಯ ಇತಿ ವೃತ್ತಾಂತ
ಕುಮಾರಸ್ವಾಮಿ ಅವರ ತಂದೆ ಡಾ.ಪಿ.ವೆಂಕಟಪ್ಪ ವೈದ್ಯಾಧಿಕಾರಿ. ತಾಯಿ ವಿ.ಲಕ್ಷ್ಮಮ್ಮ ಗೃಹಿಣಿ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಮಾರಪ್ಪನಪಾಳ್ಯದ ವಿ.ಎಂ.ಕುಮಾರಸ್ವಾಮಿ ಹುಟ್ಟಿದ್ದು- ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಗ್ರಾಮದಲ್ಲಿ , ಮೇ 3 1949 ರಂದು.
ಕುಮಾರಸ್ವಾಮಿ ಅವರಿಗೆ ಇಬ್ಬರು ಸಹೋದರರು ಹಾಗೂ ಇಬ್ಬರು ಸೋದರಿಯರು. ಐದೂ ಮಂದಿ ಅಮೆರಿಕಾದಲ್ಲೇ ಇದ್ದಾರೆ. ಗಿರಿಜಾ ರಾಂ ಲಾಸ್ ವೆಗಾಸ್ನಲ್ಲಿದ್ದಾರೆ. ಡಾ.ಎಂ.ವಿ.ಗೋಪಿನಾಥ್, ಕುಮಾರಸ್ವಾಮಿ, ಅಕ್ಕ ಮಹಾದೇವಿ, ಡಾ.ವಿ.ಎಂ. ಪದ್ಮನಾಭ ಕ್ಯಾಲಿಫೋರ್ನಿಯಾ ನಿವಾಸಿಗಳು.
ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ 1971 ಸಿವಿಲ್ ಇಂಜಿನಿಯರಿಂಗ್ ಪದವಿ ಪೂರೈಸಿದ ಕುಮಾರಸ್ವಾಮಿ- ಬಿಎಂಎಸ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ (1971-74) ಪೂರೈಸಿದರು. ಅಮೆರಿಕಾದUniversity of Wiscosin Whitewater,ನಿಂದ ಎಂಬಿಎ ಪದವಿ ಪಡೆದ ಜಾಣ ವಿದ್ಯಾರ್ಥಿ ಅವರು.
ಕುಮಾರಸ್ವಾಮಿ ಅವರ ಪತ್ನಿ ಸುಧಾರಾಣಿ ರಾಮಕೃಷ್ಣ ಬೆಂಗಳೂರಿನ ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದವರು. ಕುಮಾರಸ್ವಾಮಿ ಹಾಗೂ ಸುಧಾರಾಣಿ ಅವರ ಮದುವೆ ನಡೆದದ್ದು 1974, ಏಪ್ರಿಲ್ 11 ರಂದು. ದಂಪತಿಗಳಿಗೆ ಮೂವರು ಮಕ್ಕಳು : ಆರತಿಗೆ ಮಲ್ಲಿಕಾ ಕುಮಾರಸ್ವಾಮಿ ಹಾಗೂ ರಜನಿ ಕುಮಾರಸ್ವಾಮಿ, ಕೀರುತಿಗೆ ಶ್ರೀನಿವಾಸ್ ಕುಮಾರಸ್ವಾಮಿ.
ಅಂದಹಾಗೆ, ಕನಸುಗಳೊಂದಿಗೆ ಕುಮಾರಸ್ವಾಮಿ ಅಮೆರಿಕೆಗೆ ಪಾದ ಬೆಳೆಸಿದ್ದು- 1975 ರ ಜನವರಿ 5 ರಂದು.
ಈಗ ಕುಮಾರಸ್ವಾಮಿ ಏನು ಮಾಡುತ್ತಿದ್ದಾರೆ-
- ಅಮೆರಿಕಾದ ವಿಶ್ವ ವಿದ್ಯಾಲಯವೊಂದರಲ್ಲಿ ಕನ್ನಡ ಪೀಠ ಸ್ಥಾಪಿಸುವುದು ಅವರ ಕನಸು. ಅದಕ್ಕಾಗಿ’ಅಕ್ಕ’ ಸಹಯೋಗದಲ್ಲಿ ನಿಧಿಯಾಂದನ್ನು ಸ್ಥಾಪಿಸಲಾಗಿದೆ. ಅಮೆರಿಕಾದಲ್ಲಿನ ಎಲ್ಲ ವಿಶ್ವ ವಿದ್ಯಾಲಯಗಳನ್ನು ಕುಮಾರಸ್ವಾಮಿ ಸಂಪರ್ಕಿಸಿದ್ದಾರೆ. ಕನ್ನಡ ಪೀಠ ಸ್ಥಾಪನೆಗೆ ಪೆನ್ಸಿಲ್ವೇನಿಯಾ ವಿಶ್ವ ವಿದ್ಯಾಲಯ ಆಸಕ್ತಿ ತೋರಿಸಿದೆ.
- ಪೆನ್ಸಿಲ್ವೇನಿಯಾ ವಿವಿ ನೆರವಿನಲ್ಲಿ WE TALKನ್ನುವ ವೆಬ್ ಆಧರಿತ ಕನ್ನಡ ಕಲಿಕೆ ಕಾರ್ಯಕ್ರಮವನ್ನು ರೂಪಿಸುತ್ತಿದ್ದಾರೆ.
- ವಿಶ್ವಾದ್ಯಂತ ಇರುವ ಕನ್ನಡ ಸಂಘಟನೆಗಳನ್ನು ಸಂಪರ್ಕಿಸಿ, ಕರ್ನಾಟಕದ ವಾಣಿಜ್ಯ ಹಾಗೂ ಪ್ರವಾಸೋದ್ಯಮವನ್ನು ಪ್ರೋತ್ರಾಹಿಸುವ ಕಾರ್ಯಕ್ರಮಗಳ ಸಮಾನ ಮಾಧ್ಯಮವನ್ನು ರೂಪಿಸುವ ಭಗೀರಥ ಪ್ರಯತ್ನ.
- ಲಾಸ್ ಏಂಜಲೀಸ್ನ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾಲಯದ ಸಾರ್ವಜನಿಕ ಆರೋಗ್ಯ ಇಲಾಖೆ ಹಾಗೂ ಕರ್ನಾಟಕ ಆರೋಗ್ಯ ಕಾರ್ಯಪಡೆ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಿಸುವ ಮೂಲಕ, ಕರ್ನಾಟಕದಲ್ಲಿ ಪ್ರಾಥಮಿಕ ಆರೋಗ್ಯ ಸಂರಕ್ಷಣೆ ಹಾಗೂ ಸಾರ್ವಜನಿಕ ಆರೋಗ್ಯ ಸಂಸ್ಥೆಗಳನ್ನು ಸ್ಥಾಪಿಸುವ ಯೋಜನೆಗೆ ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ. ಯೋಜನೆ ಪ್ರಗತಿಯಲ್ಲಿದೆ.
____________________________________________________________
“ಈ-ಕವಿ” ಸಂಸ್ಥೆಯು ಕನ್ನಡನುಡಿಗಾಗಿ, ಕನ್ನಡನಾಡಿಗಾಗಿ, ಕನ್ನಡಿಗರಿಗಾಗಿ ಸದಾಕಾಲ ದುಡಿಯುವ ಸಲುವಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ.”ಈ-ಕವಿ” ಸಂಸ್ಥೆಯು ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ದತ್ತುತೆಗೆದುಕೊಳ್ಳುವ, ಬಡ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಕೊಡುವ, ಬಡಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವ, ಕೊಳಗೇರಿ ಪ್ರದೇಶದಲ್ಲಿ ವಾಸಿಸುವ ಮಕ್ಕಳನ್ನು ಭೇಟಿಮಾಡಿ ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಗುರಿಯನ್ನು ಮುಟ್ಟುವ ಸಲುವಾಗಿ “ಈ-ಕವಿ” ಪ್ರತಿ ಜಿಲ್ಲೆಗಳಲ್ಲಿ, ಪ್ರತಿ ತಾಲ್ಲೂಕುಗಳಲ್ಲಿ ಶಾಖೆಗಳನ್ನು ಪ್ರಾರಂಭಿಸಲಾಗಿದೆ. ಇದರಿಂದಬೆಂಗಳೂರಿನಲ್ಲಿ ವಾಸಿಸುತ್ತಿರುವ ಕನ್ನಡಿಗರಿಗೆ ತಮ್ಮ ತಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ , ಹಳ್ಳಿಗಳ ಬಗ್ಗೆ ಚಿಂತಿಸಿ, ತನ್ನನ್ನು ಬೆಳೆಸಿದ ಊರಿಗೆ ಸಹಾಯ ಮಾಡುವ ಒಂದು ಸುವರ್ಣಾವಕಾಶ “ಈ-ಕವಿ” ಯಲ್ಲಿ ಕಲ್ಪಿತವಾಗಿದೆ. ಬನ್ನಿ ಸೋದರರೇ , ನಾವೆಲ್ಲ ಒಂದಾಗಿ ದುಡಿಯೋಣ.
ABOUT VMK - CLICK here - There might be fonts problems- written in 2002
http://www.kannadaratna.com/nri/kumaraswamy.html
http://ellakavi.wordpress.com/about/
http://ellakavi.wordpress.com/2007/08/06/ekavi-29-districts -and-177-taluqs-communities-joinall-of-your-communities/
http://ellakavi.wordpress.com/2007/11/30/ekavi-gok-school-adoption/
http://ellakavi.wordpress.com/2007/10/16/ekavi-suvarna-sambrama-program/