Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

EKAVI NADEDUBANDA DAARI

ekavi-2.jpg

ಈ-ಕವಿ (ಎಲ್ಲ ಕನ್ನಡ ಅಭಿಮಾನಿಗಳ ಅಂತರಾಷ್ಟ್ರಿಯ ವೇದಿಕೆ)
ಎಲ್ಲಾದರು ಇರು,
ಎಂತಾದರು ಇರು,
ಎಂದೆಂದಿಗು ನೀ,
ಕನ್ನಡವಾಗಿರು. ಕುವೆಂಪು.
ಏನಿದು ಈ-ಕವಿ?
ಎಲ್ಲಾ ಕನ್ನಡ ಅಭಿಮಾನಿಗಳ ಅಂತರಾಷ್ಟ್ರಿಯ ವೇದಿಕೆ.
ಕನ್ನಡಕ್ಕಾಗಿ ಅಂತರ್ಜಾಲದಲ್ಲಿ ಹುಟ್ಟಿಕೊಂಡ ಒಂದು ತಂಡ. ಕನ್ನಡದ ಏಳಿಗೆಗೆ ಶ್ರಮಿಸುತ್ತಿರುವ ಎಲ್ಲ ಕನ್ನಡಿಗರನ್ನು ಒಂದೆಡೆ ಸೇರಿಸಿದೆ.


ದಿನಾಂಕ ೧೮ ಜನವರಿ ೨೦೦೪ ರಂದು ಡಾ|| ಚಂದ್ರಶೇಖರ ಕಂಬಾರ ರವರಿಂದ ಈ-ಕವಿ ಬೆಂಗಳೂರಿನಲ್ಲಿ ಉದ್ಘಾಟನೆ.

ಈಗಾಗಲೆ ಪ್ರಪಂಚದ ಮೂಲೆ ಮೂಲೆಯನ್ನು ತಲುಪಿ ಅಮೇರಿಕ, ಇಂಗ್ಲೆಂಡ್, ದಕ್ಷಿಣ ಆಫ಼್ರಿಕ, ಸಿಂಗಪೂರ್, ಮಲೇಷಿಯ, ಸೌದಿ ಮುಂತಾದ ದೇಶಗಳಲ್ಲಿರುವ ಕನ್ನಡಿಗರನ್ನು ಒಂದೆಡೆ ಸೇರಿಸಿದೆ, ಹಾಗೆಯ ಭಾರತದಲ್ಲಿ ಬೆಂಗಳೂರು, ಮೈಸೂರು, ತುಮಕೂರು, ಹೈದರಾಬಾದ್ನಲ್ಲಿ ಈ-ಕವಿಯು ಹರಡಿಕೊಂಡಿದೆ.

ಈ-ಕವಿ ನಡೆದು ಬಂದಿರುವ ಹಾದಿ. . .


೧. ಯಾವುದೊ ಒಂದು ಖಾಸಗಿ ಸಂಸ್ಥೆಯ ಸ್ವಾಮ್ಯದಲ್ಲಿ ಕುಗ್ಗುತ್ತಿದ್ದ ಕನ್ನಡ ತಂತ್ರಾಂಶದ ಅಭಿವೃದ್ಧಿಯ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿ ಸರ್ಕಾರವು ಕನ್ನಡ ತಂತ್ರಾಂಶದ ಬಗ್ಗೆ ಗಮನ ಹರಿಸುವಂತೆ ಮಾಡಿದೆ.


೨. ಈಗಾಗಲೆ ಮಂಡ್ಯ, ಹಾಸನ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಮೂರು ಸರ್ಕಾರಿ ಶಾಲೆಗಳನ್ನು ದತ್ತು ತೇಗೆದುಕೊಂಡು, ಆ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪಠ್ಯ ಪುಸ್ತಕ ಮತ್ತು ನೋಟ್ ಪುಸ್ತಕಗಳನ್ನು ಪ್ರತಿ ವರ್ಷ ಶಾಲೆಯ ಆರಂಭದಲ್ಲಿ ವಿತರಿಸಲಾಗುತ್ತಿದೆ.


೩.ಚಿತ್ರಮಂದಿರ ಮಾಲಿಕರು ಮತ್ತು ಕೆಲವು ನಿರ್ಮಾಪಕರ ಕನ್ನಡ ವಿರೋಧಿ ನಿಲುವು ಹಾಗೂ ಪರಭಾಷಾ ವ್ಯಾಮೋಹವನ್ನು ವಿರೋಧಿಸಿ ಸಾಫ್ಟ್ವೇರ್ ತಂತ್ರಜ್ಞರು ಬೀದಿಗಿಳಿದು ಹೋರಾಟ ನಡೆಸಿದರು.


೪.ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸುವಂತೆ ಅಂದಿನ ಸಚಿವರಾದ ಶ್ರೀ ಪಿ.ಜಿ.ಆರ್.ಸಿಂಧ್ಯಾ ರವರಲ್ಲಿ ಮನವಿ ಸಲ್ಲಿಸಿ, ಸರ್ಕಾರದ ಮೇಲೆ ಒತ್ತಡ ಹೇರಲಾಯಿತು. ಅದರ ಪರಿಣಾಮವಾಗಿ ಐ.ಟಿ. ಮತ್ತು ಬಿ.ಟಿ. ಕಂಪನಿಗಳಾದ ಇನ್ಫೊಸಿಸ್, ವಿಪ್ರೊ, ಬಯೋ ಕಾನ್ ಕಂಪನಿಗಳ ಮುಖ್ಯಸ್ಥರು ಎಚ್ಚೆತ್ತುಕೊಂಡರು.


೫. ರಾಷ್ಟ್ರಕವಿ ಕುವೆಂಪು ಜನ್ಮಶತಮಾನೋತ್ಸವದ ಅಂಗವಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಭಾವ ಗೀತೆ ಮತ್ತು ಏಕ ಪಾತ್ರಾಭಿನಯದ ಜಿಲ್ಲಾ ಮಟ್ಟದ ಸ್ಪರ್ಧೆ ಏರ್ಪಡಿಸಿದ್ದೆವು.


೬.ದಿನಾಂಕ ೧೨ ಡಿಸೆಂಬರ್ ೨೦೦೪ ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಗೀತ, ವೈಚಾರಿಕತೆ, ನೃತ್ಯ ಮತ್ತು ನಾಟಕಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕುವೆಂಪು ಜನ್ಮಶತಮಾನೋತ್ಸವದ ಆಚರಿಸಿದೆವು.


೭. ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಕೆಲಸ ದೊರಕುವಂತೆ ತಂಡದಲ್ಲಿ ಉದ್ಯೋಗಾವಕಾಶಗಳ ಬಗ್ಗೆ ಪ್ರಕಟಣೆಗಳನ್ನು ಮಾಡುತ್ತಿರುತ್ತೇವೆ.


೮.ರೇಡಿಯೊ ಸಿಟಿ(ಎಫ್ ಎಂ ೯೧)ನಲ್ಲಿ ಕನ್ನಡದ ಕಾರ್ಯಕ್ರಮಗಳು ಹೆಚ್ಚಿಗೆ ಬರುವಂತೆ ಒತ್ತಾಯಿಸಿದ ಸುಮಾರು ೧೦ ಸಾವಿರ ಜನರ ಸಹಿಸಂಗ್ರಹ ಮಾಡಿ, ಇದನ್ನು ರೇಡಿಯೊ ಸಿಟಿ ಆಡಳಿತ ವರ್ಗದರೊಂದಿಗೆ ಚರ್ಚಿಸಿ ಪ್ರೈಂ ಟೈಂನಲ್ಲಿ ಪ್ರಸಾರವಾಗುವಂತೆ ಮಾಡಿದೆವು.


೯.ಗ್ರಾಮೀಣ ಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾಭ್ಯಾಸ, ಅಧ್ಯಯನದಕ್ರಮ, ವೃತ್ತಿಪರ ಶಿಕ್ಷಣ ಕಾರ್ಯಗಾರಗಳನ್ನು ವಿವಿಧ ಜಿಲ್ಲೆಗಳಾದ ಹಾಸನ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರದ ಜವಹರ್ ನವೋದಯ ವಿದ್ಯಾಲಯಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.


೧೦. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಕಂಪ್ಯೂಟರ್ ಬಗ್ಗೆ ಅರಿವು ಮೂಡಿಸಿ, ಅದನ್ನು ವ್ಯಾಪಕವಾಗಿ ಉಪಯೋಗಿಸುವಂತೆ ತರಬೇತಿ ನೀಡಲಾಗುತ್ತಿದೆ.


೧೧. ಡಾ||ರಾಜ್ ಕುಮಾರ್ ಸ್ಮರಣಾರ್ಥ ರಕ್ತದಾನ ಹಾಗು ನೇತ್ರದಾನ ಶಿಬಿರ ನಡೆಸಲಾಯಿತು. ಡಾ|| ರಾಜ್ ರವರ ಸಮಾದಿಯ ಬಳಿ ೧೦೦೧ ದೀಪಗಳನ್ನು ಹಚ್ಚಿ ದೀಪ ನಮನ ಸಲ್ಲಿಸಿದೆವು. ಆಗಸ್ಟ್ ೬ ರಂದು ಡಾ|| ರಾಜ್ ಸವಿನೆನಪಿಗಾಗಿ ನಾದಮಯ ಈ ಲೋಕವೆಲ್ಲ. . . ರಸಸಂಜೆ ಕಾರ್ಯಕ್ರಮವನ್ನು ಆಯೋಜಿಸಿ, ಹಿರಿಯ ನಟರಾದ ಕೆ.ಎಸ್.ಅಶ್ವಥ್ ರವರಿಗೆ ಗೌರವಾನ್ವಿತವಾಗಿ ಸನ್ಮಾನಿಸಲಾಯಿತು.


೧೨. ನಾದಮಯ ಈ ಲೋಕವೆಲ್ಲ - ರಸಸಂಜೆ ಕಾರ್ಯಕ್ರಮದಲ್ಲಿ ಸುಮಾರು ೧೩ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವುದರ ಮೂಲಕ ಪ್ರೊತ್ಸಾಹಿಸಿದೆವು.


೧೩. ರಾಷ್ಟ್ರಪ್ರಶಸ್ಥಿ ಪಡೆದ ಚಲನಚಿತ್ರಗಳಾದ ಬೇರು, ಹಸೀನಾ, ಸ್ಟಂಬಲ್ ಮುಂತಾದ ಕಲಾತ್ಮಕ ಚಿತ್ರಗಳ ವಿಶೇಷ ಪ್ರದರ್ಶನದೊಂದಿಗೆ, ಆ ಚಿತ್ರತಂಡದೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೆವೆ.


ಈ-ಕವಿಯ ಮುಂದಿನ ಯೋಜನೆಗಳು . . . .


೧. ಸರ್ಕಾರದ ಮೇಲೆ ಒತ್ತಾಯ ತಂದು ಕನ್ನಡವನ್ನು ಆಡಳಿತ ಭಾಷೆಯಾಗಿ ಅನುಷ್ಠಾನಗೊಳಿಸುವುದು.


೨. ವೃತ್ತಿಪರ ಶಿಕ್ಷಣ ತರಬೇತಿಯನ್ನು ನಾಡಿನ ಮೂಲೆ ಮೂಲೆಗಳಲ್ಲಿ ನಡೆಸುವುದು.


೩. ಗ್ರಾಮಾಂತರ ಜಿಲ್ಲೆಗಳಲ್ಲಿ ಉಚಿತ ವೈದ್ಯಕೀಯ ತಪಾಸಣ ಶಿಬಿರವನ್ನು ಹಮ್ಮಿಕೊಳ್ಳುವುದು.

ekavi-2.jpg

 

 

 

J®è PÀ£ÀßqÀ C©üªÀiÁ¤UÀ¼À ªÉâPÉ EAlgï£ÁåµÀ£À¯ï (F-PÀ«)

F ªÉâPÉAiÀÄÄ CavÀgÁ¶ÃÖçAiÀÄ PÀ£ÀßqÀ «ZÁgÀªÉâPÉAiÀiÁVzÀÄÝ PɼÀUÉ w½¹gÀĪÀ GzÉÝñÀUÀ½UÉ vÀ£ÀߣÀÄß ªÀÄÄqÀÄ¥ÁVnÖgÀÄvÀÛzÉ :


· PÀ£ÀßrUÀjUÁV ºÁUÀÄ PÀ£ÀßrUÀgÀ ¥Àj¥ÀÇtð ZÀlĪÀnPÉUÀ½UÁV.


· PÀ£ÀßqÀ ¸Á»vÀå ªÀÄvÀÄÛ PÀ£ÁðlPÀzÀ ¸ÀA¸ÀÌöÈwAiÀİè D¸ÀQÛAiÀÄļÀî d£ÀjUÁV.


· PÀ£ÀßqÀ ¸ÀA¸ÀÌöÈwAiÀÄ£ÀÄß ªÀÄvÀÄÛ ¥ÀgÀA¥ÀgÉAiÀÄ£ÀÄß G½¹, ¨É¼É¹ dUÀwÛ£ÁzÀåAvÀ CzÀgÀ ¸ÀÄUÀAzsÀ ©ÃgÀĪÀÅzÀPÁÌV.


· dUÀwÛ£ÁzÀåAvÀ ªÁ妹gÀĪÀ PÀ£ÀßqÀ PÀÆlUÀ¼À£ÀÄß / ¸ÀAWÀUÀ¼À£ÀÄß / ªÉâPÉUÀ¼À£ÀÄß MAzÀÄ eÁ®zÀ°è MlÄÖUÀÆr¸À®Ä.


· AiÀÄĪÀ PÀ£ÀßrUÀgÀ£ÀÄß ¨sÀ«µÀåwÛ£À°è dªÁ¨ÁÝjAiÀÄÄvÀ £ÁAiÀÄPÀgÀ£ÁßV ªÀiÁqÀ®Ä, J¯Áè PÉëÃvÀæUÀ¼À®Æè ªÀÈwÛ¥ÀgÀgÀ£ÁßV ªÀiÁqÀ®Ä ªÀÄvÀÄÛ dUÀwÛ£À ±ÀQÛAiÀÄÄvÀ ¥ÀæeÁ¥Àæ¨sÀÄvÀézÀ MAzÀÄ ¨sÁUÀªÁ£ÁßV ªÀiÁqÀ®Ä CªÀjUÉ £À«Ã£À ªÀiÁUÀðUÀ½AzÀ PÀÆrzÀ ²PÀët PÉÆqÀĪÀÅzÀÄ.


· PÀ£ÁðlPÀzÀ°è ¨ÉÃgÀÆj ºÀgÀrgÀĪÀ ªÀÄvÀÄÛ CvÀåAvÀ ªÉÊ«zsÀåvÉAiÀÄ£ÀÄß ºÉÆA¢gÀĪÀ PÀ£ÀßqÀ £É®zÀ ¨sÁµÉUÀ¼ÁzÀ vÀļÀÄ, PÉÆAPÀtÂ, PÀÆVð, ºÀªÀåPÀ, ¸ÀAPÉÃw, §ÈBZÀÑgÀt, EvÁå¢UÀ½UÉ ¥ÉÇæÃvÁìºÀ PÉÆqÀĪÀÅzÀÄ.


· CªÉÄÃjPÉAiÀÄ°è ªÀÄvÀÄÛ dUÀwÛ£À ««zsÀ ¨sÁUÀUÀ¼À°è PÀ£ÀßqÀ ²PÀëuÁ¨sÁå¸ÀªÀÅ ±Á±ÀévÀªÁV £É¯ÉUÉÆ¼ÀÄîªÀAvÉ ªÀiÁqÀĪÀÅzÀÄ.


· PÀ£ÀßqÀ ¨sÁµÉ ªÀÄvÀÄÛ ¸ÀA¸ÀÌöÈwUÉ ªÀÄvÀÛµÀÄÖ WÀ£ÀvÉAiÀÄ£ÀÄß vÀAzÀÄPÉÆqÀĪÀÅzÀÄ.


· PÀ£ÀßqÀªÀ£ÀÄß PÀ°AiÀÄ®Ä CvÀÄåvÀÛªÀÄ vÀAvÀæeÁÕ£ÀªÀ£ÀÄß C¼ÀªÀr¸ÀĪÀÅzÀÄ ªÀÄvÀÄÛ C©üªÀÈ¢Þ¥Àr¸ÀĪÀÅzÀÄ.


· PÀ£ÀßrUÀgÀÄ £ÀªÀÄä ¨sÁµÉAiÀÄ£ÀÄß ²æÃªÀÄAvÀUÉÆ½¸ÀĪÀAvÉ ªÀÄvÀÄÛ £ÀªÀÄä vÁAiÀiÁßrUÉ CvÀÄå£ÀßvÀ PÁtÂPÉUÀ¼À£ÀÄß ¤ÃqÀĪÀAvÉ CªÀgÀ£ÀÄß ¥ÉæÃgÉæ¸ÀĪÀÅzÀÄ.

dUÀwۣɯÉèqÉ PÀ£ÀßqÀªÀ£ÀÄß PÀ°AiÀÄ®Ä §AiÀĸÀĪÀ d£ÀjUÉ G¥ÀAiÉÆÃUÀªÁUÀ®Ä CAvÀeÁð®zÀ°è “Web Enabled Teaching And Learning Kannada(WE-TALK) JA§ PÁAiÀÄðPÀæªÀĪÀ£ÀÄß C©üªÀÈ¢Þ¥Àr¸ÀĪÀÅzÀÄ.


· PÀ£ÀßqÀ ¨sÁµÉAiÀÄ£ÀÄß PÀ°¸À®Ä ºÁUÀÆ PÀ£ÀßqÀzÀ EvÀgÀ PÁAiÀÄðPÀæªÀÄUÀ¼À£ÀÄß £ÀqɸÀ®Ä ««zsÀ zÉñÀUÀ¼À°ègÀĪÀ ²PÀët ¸ÀA¸ÉÜUÀ½UÉ ¸ÀºÁAiÀÄ ªÀiÁqÀĪÀÅzÀÄ.


· GvÀÛgÀ CªÉÄÃjPÉAiÀİègÀĪÀ ºÁUÀÆ dUÀwۣɯÉèqÉ EgÀĪÀ PÀ£ÀßrUÀgÀ ZÀlĪÀnPÉUÀ¼À£ÀÄß §®¥Àr¹ MPÉÆÌgÀ® zÀ¤AiÀÄ£ÁßV ªÀiÁqÀĪÀÅzÀÄ.


· ªÀÄvÉÆÛ§âgÀ «ZÁgÀUÀ¼À£ÀÄß UËgÀ«¸ÀĪÀÅzÀÄ. PÀ£ÀßrUÀgÁzÀ £ÁªÀÅ ªÀÄvÉÆÛ§âgÀ ¸À®ºÉUÀ½UÉ ªÀiÁ£ÀåvÉ PÉÆlÖgÉ, CzÀjAzÀ £ÁªÀÅ ¥ÀgÀ¸ÀàgÀ PÉÆqÀĪÀ UËgÀªÀªÀ£ÀÄß vÉÆÃj¹zÀ ºÁUÉAiÉÄÃ.


· J¯Áè PÀ£ÀßrUÀgÀÄ ªÀÄvÀÄÛ PÀ£ÀßqÀ PÀÆlUÀ¼ÀÄ F ºÉƸÀ ªÉâPÉAiÀÄ ZÀlĪÀnPÉUÀ¼À°è ¨sÁUÀªÀ»¸ÀĪÀgÉA§ C©ü¯ÁµÉ £ÀªÀÄäzÀÄ.
F-PÀ«AiÀÄÄ 2AA3 ªÀÄvÀÄÛ 2AA4gÀ ªÀµÀðUÀ¼À°è PÉ®ªÀÅ PÁAiÀÄðPÀæªÀÄUÀ¼À£ÀÄß ºÀ«ÄäPÉÆ¼Àî°zÉ, EzÀgÀ «ªÀgÀUÀ¼À£ÀÄß ªÀÄÄA¢£À ¥ÀvÀæzÀ°è w½¸À¯ÁUÀĪÀÅzÀÄ.


F-PÀ«AiÀÄÄ ¤ªÀÄä CªÀÄÆ®å ¸À®ºÉUÀ½UÁV PÁvÀgÀ¢AzÀ PÁAiÀÄÄwÛzÉ.


F-PÀ«AiÀÄ vÀAqÀzÀ°è ¥ÁvÀæ ¤ªÀð»¸À®Ä CxÀªÀ ¤ªÀÄä zÉñÀzÀ°è£À ±ÁSÉAiÀÄ §UÉÎ w½AiÀÄ®Ä EZÉÒAiÀÄļÀîªÀgÀÄ E-¥ÀvÀæzÀ ªÀÄÆ®PÀ ¸ÀA¥ÀQð¸À¨ÉÃPÉAzÀÄ «£ÀAw.


F-PÀ«AiÀÄ ¨É¼ÀªÀtÂUÉ ºÁUÀÄ K¼ÉÎUÁV ¤ªÀÄä ¨ÉA§® ªÀÄÄRå, ºÁ¢ðPÀ ¸ÀºÁAiÀÄ ¤Ãr F ¸ÀAAiÀÄÄPÀÛ AiÀÄvÀߪÀ£ÀÄß AiÀıÀ¹éUÉÆ½¹!


- zsÀ£ÀåªÁzÀUÀ¼ÀÄ.

F-PÀ«AiÀÄ ¸ÀA¸ÁÜ¥ÀPÀ ¸ÀzÀ¸ÀågÀÄ ºÁUÀÄ F-PÀ« ¨ÉAUÀ¼ÀÆgÀÄ PÉÃAzÀæ ¸À«Äw

ºÁUÀÄ «±ÀézÁzÀåAvÀ D¸ÀPÀÛ PÀ£ÀßrUÀgÀÄ

 

July 20, 2007 Posted by ellakavi | EKAVI, EKAVI BIJAPUR | | 21 Comments

ಜಲಪಾತ - jalapaatha kavana by girish shetty

 ekavi-2.jpg

ಜಲಪಾತ

ಜರಿ ಜರಿಯಾಗಿ ಧರೆಗಿಳಿವ ರಮಣೀಯ ಜಲಧಾರೆ
ಬೆಳ್ಳನೆ ಬೆಳದಿಂಗಳೋಪಾದಿ ದುಮ್ಮುಕ್ಕಿ ಹರಿಯುತಿರೆ.
ದಟ್ಟಡವಿಯಲ್ಲಿ, ಬೆಟ್ಟದತಡಿಯಲ್ಲಿ ಸಾಗುತಿರೆ ಭರದಿ ಮುಂದೆ ಮುಂದೆ
ನಾ ಒಲ್ಲೆನೆನದೆ ಯಾರಿಗೂ, ಸೆಳೆದುಕೊಳ್ಳುತ್ತಾ ಎಲ್ಲವ ತನ್ನ ಹಿಂದೆ ಹಿಂದೆ.

ಕಡಲ ಮಡಿಲ ಸೇರುವಾಗ ನೀ ತಾಳಿದರೇನಿಲ್ಲ ರೌದ್ರವ ರೂಪವ ಅತಿಶಯೋಕ್ತಿ
ಆದರೂ ಅದು ಎನಿತು ಸಾಧ್ಯ ಪ್ರಶಾಂತವಾಗಿ ಹರಿವ ನಿನ್ನೀ ಆ ಶಕ್ತಿ.
ಬೋರ್ಗರೆವ ಮಳೆಯಂತೆ ನೀ ಸ್ರಸ್ಟಿಸುವೆ ಸುಂದರ ಜಲಪಾತ
ನಿನ್ನ ಭಾವನೆಗಳೇ ನೀರ ಹನಿಗಳಾಗಿ ನಿರ್ಮಿಸಿದೆ ಅಗಾಧ ಪ್ರಪಾತ.

ಕಣ ಕಣವಾಗಿ ತತ್ತರಿಸುತ್ತಿವೆ ತರಗೆಲೆಯಂತೆ ಸಿಕ್ಕಿ ಕಲ್ಲುಗಳ ನಡುವೆ
ನೋವ ಮರೆತೂ ನಿಂತು ನೀ ನಗುತಿರುವೆ ಕಾರಂಜಿಯ ಚಿಲುಮೆಯಂತೆ ಚೆಲುವೆ.
ಈ ಭಾವನೆಗಳೇ ಹೀಗೆ!, ಕೆಡಿಸುವದು ಪ್ರಶಾಂತವಾಗಿರುವ ಮನಸ್ಸ ನೀರವತೆ
ನಿಂತ ನೀರ ಕಲಕಿ ಅಲೆಯೆಬ್ಬಿಸುವ ಕಲ್ಲಿನಂತೆ.

ನಿನಗಿರುವ ಸಹನೆ, ಶಕ್ತಿ ನನಗೆಲ್ಲಿ? ಭಾವನೆಗಳ ಹಿಡಿತಕ್ಕೆ ಸಿಕ್ಕಿ ಬಳಲುತಿರೆ ನಾನು
ಎಲ್ಲವ ಸೇರಿಸಿ ತನ್ನ ಗರ್ಭದೊಳಗೆ, ಮತ್ತೆ ಮುಂದೆ ಹರಿದು ಬಳಕುತಿರೆ ನೀನು.
ಅಂಕು ಡೊಂಕಾಗಿ ಹರಿವ ನಿನ್ನ ನೋಡಲೊಂದು ಹಬ್ಬ ಆರಾಧಕನ ಕಣ್ಣಲ್ಲಿ
ನಿನ್ನ ನಿರ್ಮಲ ಮೈಯ ಮೇಲೊಂದು ನೀರ ಹನಿಯಾಗಿ ಹರಿಯುವಾಸೆ ನನ್ನಲ್ಲಿ.

GIRISH SHETTY

July 20, 2007 Posted by ellakavi | Kavanagalu by Kannadigas | | 3 Comments

aabale-sabale kavana byGirish Shetty

ಅಬಲೆ-ಸಬಲೆ

ಬಿಟ್ಟು ಬಿಟ್ಟಳು ಬಿಗುಮಾನ, ಹಿಡಿದಿಟ್ಟಳು ಓಡುತ್ತಿರುವ ಮನಸ್ಸನ್ನ
ಕೂಗುತಿತ್ತು ಹ್ರದಯ ಸೋಲುತಿಹೆನು ನಾನು, ಸೋಲ ಬಿಡಬೇಡ ನೀನನ್ನ
ಮನಸ್ಸು ಹ್ರದಯಗಳ ನಡುವೆ ಭಾವನೆಗಳು ನಡೆಸುತಿರೆ ಕೋಲಾಹಲ
ಹಿನ್ನಲೆ ಎಂಬಂತೆ, ಮಿಂಚು ಗುಡುಗುಗಳು ಸ್ರಷ್ಟಿಸಿವೆ ಮನಸ್ಸಲ್ಲಿ ಹಾಲಾಹಲ

ಬಿಟ್ಟು ಬಿಟ್ಟಳು ಬಿಗುಮಾನ, ಹಿಡಿದಿಟ್ಟಳು ಓಡುತ್ತಿರುವ ಮನಸ್ಸನ್ನ
ಋಷಿ ಪತ್ನಿ ಅಹಲ್ಯೆ ಆಗಲಿಲ್ಲವೆ ಬಲಿ ತನ್ನದಲ್ಲದ ತಪ್ಪಿಗೆ?
ಮರ್ಯಾದ ಪುರುಷೊತ್ತಮನ ಸತಿಯೂ ಬೀಳಬೇಕಾಯ್ತಲ್ಲ ಕೊನೆಗೆ ಬೆಂಕಿಗೆ!
ಹಡೆದೈದು ಮಕ್ಕಳ ಶಿರವಿಲ್ಲದ ಶರೀರವ ನೋಡಬೇಕಾಯ್ತಲ್ಲ ಪಂಚಾಲಿಗೆ!

ತನ್ನದಲ್ಲದ ತಪ್ಪು, ಕಾಯುವುದೇ ಇನ್ನೂ ಮುಪ್ಪು? ಆಕೆಯ ಮನಸ್ಸಿನ್ನೂ ಬರಿ ಒಗಟು
ಅಹಲ್ಯೆ, ಸೀತೆ, ದ್ರೌಪದಿಯರಿಗಿದ್ದ ಒಬ್ಬ ಶ್ರೀಹರಿ ಕಾಪಾಡಲು, ಕಾಡಲು
ಸೀತೆ ತಾನಾಲ್ಲವಲ್ಲ, ಸಾಂತ್ವಾನ ಹೇಳಲು ಬರಲಿಲ್ಲ ಆಂಜನೇಯ ರಾಮನ ಬದಲು
ಬಯಕೆಯ ಹಿಡಿದಿಟ್ಟು, ಕಾಮವ ಹೊರಗಿಟ್ಟು ನಲುಗುತಿಹಳವಳು ರಾತ್ರಿ ಹಗಲು

ಕಗ್ಗತ್ತಲು, ದೂರದಿ ಬೆಳಕು, ಸಡಿಲವಾಗುತಿಹುದು ಆಸೆ, ಬಯಕೆಗಳ ಬೇಲಿ
ಬಿಸಿಲು ಮಳೆಗೆ ಎದೆಯೊಡ್ಡಿ ಶಿಥಿಲವಾಗುತಿಹುದು ಮೈ ಮನಸೆಲ್ಲಾ ಕಾಲಿ ಕಾಲಿ
ತಿರುಗಿ ಬರುವನಾತ, ತೋಳ ತೆಕ್ಕೆಯೊಳಗೆ ಸೆಳೆದುಕೊಳ್ಳುವನಾತ, ಎಲ್ಲ ಬರಿ ಕಲ್ಪನೆ
ಹಿಡಿದಿಟ್ಟ ಆಸೆ ಗೋಪುರಗಳು ತರಿಸುತ್ತಿವೆ ಹೇದಹ ತುಂಬೆಲ್ಲಾ ಪ್ರಸವದ ವೇದನೆ
ಕಿಟಕಿಯ ಬಡಿದು ಗಾಳಿ ನುಗ್ಗಿ ಬರಲು, ಸಂಯಮ ಸಡಿಲವಾಗುತ್ತಿದೆ ಮೆಲ್ಲ ಮೆಲ್ಲನೆ

ಪರದೆ ಸರಿಸಿ ಹೊರ ನೋಡಿದರೆ, ದೂರದಲ್ಲೊಂದು ಬೆಳಕಿನ ಗೋಲ
ಇಣಕಿ ನೋಡುತ್ತಿದ್ದ ಉದಯ ರವಿ ಹುಟ್ಟಿಸಿ ನವಿರಾದ ಹೊಸ ಹೊಸ ಬಯಕೆ
ಕಾತುರ ಆತುರಗಳ ಕೂಡಿಟ್ಟಳು ನಾಗಾಲೋಟದಿ ಓಡುವ ಮನಸ್ಸಿನ ತುಂಬೆಲ್ಲ
ತಲೆ ಎತ್ತಿ ಹೊರ ನಡೆದಳು ಎದೆ ಭಾರ ಇಳಿಸಿ, ಮುಗುಳ್ನಗು, ಹಗುರಾದಳಾಕೆ

 GIRISH SHETTY

July 20, 2007 Posted by ellakavi | Kavanagalu by Kannadigas | | 1 Comment